Select Your Language

Notifications

webdunia
webdunia
webdunia
webdunia

ಜಾಮೀನು ನಿರಾಸೆ ಬೆನ್ನಲ್ಲೇ ಪತಿಗೆ ಧೈರ್ಯ ತುಂಬಲು ಬಂದ ವಿಜಯಲಕ್ಷ್ಮೀ

Actor Darshan Thoogudeep, Vijayalakshmi Darshan, Pavitra Gowda Bail

Sampriya

ಬಳ್ಳಾರಿ , ಸೋಮವಾರ, 30 ಸೆಪ್ಟಂಬರ್ 2024 (16:28 IST)
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 4ಕ್ಕೆ ಮುಂದೂಡಿಕೆಯಾಗುತ್ತಿದ್ದ ಹಾಗೇ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ಭೇಟಿಗೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ದರ್ಶನ್ ಆಪ್ತ, ನಟ ಧನ್ವೀರ್ ಕೂಡಾ ಇದ್ದರು. ಇನ್ನೂ ದರ್ಶನ್‌ಗೆ ಎರಡು ಬ್ಯಾಗ್‌ನಲ್ಲಿ ಬಟ್ಟೆ, ಬಿಸ್ಕೆಟ್, ಪ್ರೂಟ್ಸ್‌, ಡ್ರೈ ಪ್ರೂಟ್ಸ್‌ಗಳನ್ನು ತಂದಿದ್ದಾರೆ.

ದರ್ಶನ್ ಅವರು ಜೈಲು ಸೇರಿ ಭಾನುವಾರಗೆ 100 ದಿನ ಆಗಿದ್ದು, ಇನ್ನೂ ಪತಿಗೆ ಧೈರ್ಯ ತುಂಬಲು ವಿಜಯಲಕ್ಷ್ಮೀ ಪ್ರತಿ ಸೋಮವಾರ ಭೇಟಿ ನೀಡುತ್ತಾರೆ. ಇನ್ನೂ ಈ ಪ್ರಕರಣದಿಂದ ದರ್ಶನ್ ಅವರನ್ನು ಹೊರತರಲು ವಿಜಯಲಕ್ಷ್ಮಿ ದೇವರ ಮೊರೆ ಹೋಗುವ ಜತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಭೇಟಿ ವೇಳೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಹಾಗೂ ಪವಿತ್ರ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಅಭಿಮಾನಿಗಳಿಗೆ ನಿರಾಸೆ