Webdunia - Bharat's app for daily news and videos

Install App

ಪತ್ನಿಗೆ ಕೊನೆಯ ಕ್ಷಣದಲ್ಲಿ ಏನಾಗಿತ್ತು ಎಂದು ಹಂಚಿಕೊಂಡ ನಟ ವಿಜಯ್ ರಾಘವೇಂದ್ರ

Webdunia
ಶುಕ್ರವಾರ, 1 ಸೆಪ್ಟಂಬರ್ 2023 (09:36 IST)
ಬೆಂಗಳೂರು: ಕದ್ದ ಚಿತ್ರ ಸಿನಿಮಾದ ಪ್ರಮೋಷನ್ ಗಾಗಿ ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ನಟ ವಿಜಯ್ ರಾಘವೇಂದ್ರ ತಮ್ಮ ಪತ್ನಿಗೆ ಕೊನೆಯ ಕ್ಷಣದಲ್ಲಿ ಆಗಿದ್ದು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸ್ಪಂದನಾ ಇತ್ತೀಚೆಗಷ್ಟೇ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದಾಗ ಲೋ ಬಿಪಿ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದರು. ಅವರ ಅಕಾಲಿಕ ಮರಣ ಸ್ಯಾಂಡಲ್ ವುಡ್ ಗೆ ಶಾಕ್ ಆಗಿತ್ತು. ಸ್ಪಂದನಾ ಸಾವಿನ ಬಗ್ಗೆ ಅನೇಕ ಊಹಾಪೋಹಗಳಿದ್ದವು. ಆಕೆಗೆ ಹೃದಯಾಘಾವತಾಗಿತ್ತು, ಲೋ ಬಿಪಿ ಆಗಿತ್ತು, ಡಯಟ್ ಮಾಡಿದ್ದರಿಂದ ಹೃದಯಾಘಾತವಾಯಿತು ಎಂಬಿತ್ಯಾದಿ ಸುದ್ದಿಗಳಿದ್ದವು.

ಇದೀಗ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ವಿಜಯ್ ರಾಘವೇಂದ್ರ ಕೊನೆಯ ಗಳಿಗೆಯ ಬಗ್ಗೆ ಮಾತನಾಡಿದ್ದಾರೆ. ‘ಹೋಟೆಲ್ ನಿಂದ ಚೆಕ್ ಔಟ್ ಮಾಡೋಣವೆಂದು ಬೆಳಿಗ್ಗೆ ಎಬ್ಬಿಸಲು ಹೋದಾಗ ಏಳಲಿಲ್ಲ. ಪಲ್ಸ್ ಕಡಿಮೆಯಾಗಿತ್ತು. ಗಾಬರಿಯಾಗಿ ಒಂದು ಕ್ಷಣಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ. ಬಳಿಕ ತಕ್ಷಣವೇ ಅಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಎಲ್ಲವೂ ಮುಗಿದಿತ್ತು ಎನ್ನುವ ಸ್ಥಿತಿಯಾಗಿತ್ತು’ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ಇನ್ನು, ಪತ್ನಿಯ ಡಯಟ್ ಜೀವಕ್ಕೆ ಕುತ್ತಾಯಿತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಕಳೆದ ಎರಡು ವರ್ಷಗಳಿಂದ ಎಲ್ಲರೂ ಮಾಡುತ್ತಿದ್ದ ಡಯಟ್ ನ್ನೇ ಆಕೆಯೂ ಮಾಡುತ್ತಿದ್ದಳು. ನಾವೂ ಅದನ್ನು ದಿನನಿತ್ಯ ಮಾಡುತ್ತೇವೆ. ವಿಶೇಷವಾಗಿ ಏನೂ ಡಯಟ್ ಮಾಡುತ್ತಿರಲಿಲ್ಲ. ಅದೆಲ್ಲಾ ಸುಮ್ಮನೇ ನೆಪಗಳಷ್ಟೇ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments