Webdunia - Bharat's app for daily news and videos

Install App

ತಿರುಪತಿಯಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರಾ: ಸ್ಪಷ್ಟನೆ ನೀಡಿದ ವಿಘ್ನೇಶ್

Webdunia
ಶನಿವಾರ, 11 ಜೂನ್ 2022 (10:20 IST)
Photo Courtesy: Twitter
ಚೆನ್ನೈ: ಮದುವೆಯಾದ ಬಳಿಕ ನೇರವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದ ನವಜೋಡಿ ನಯನತಾರಾ-ವಿಘ್ನೇಶ್ ಇಲ್ಲದ  ವಿವಾದವೊಂದನ್ನು ಮೈಮೇಲೆಳದುಕೊಂಡಿದ್ದಾರೆ.

ತಿರುಪತಿಯ ಹೊರಾಂಗಣದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಫೋಟೋ ವೈರಲ್ ಆಗಿತ್ತು. ಇದು ವಿವಾದವಾಗುತ್ತಿದ್ದಂತೇ ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಮತ್ತು ಕ್ಷಮೆ ಯಾಚಿಸಿದ್ದಾರೆ.

ತಿರುಪತಿಯಲ್ಲಿ ಮದುವೆಯಾಗಬೇಕೆಂಬ ನಮ್ಮ ಕನಸು ನನಸಾಗಲಿಲ್ಲ. ಹೀಗಾಗಿ ಮದುವೆ ಮಂಟಪದಿಂದ ನೇರವಾಗಿ ಬಾಲಾಜಿಯ ದರ್ಶನ ಪಡೆಯಲು ಬಂದೆವು. ಇಲ್ಲಿ ಸ್ವಾಮಿ ಕಲ್ಯಾಣಂ ನೋಡಿ ಬಳಿಕ ಫೋಟೋ ತೆಗೆಯಲು ಬಯಸಿದ್ದೆವು. ಆದರೆ ಜನಸಂದಣಿ ಇದ್ದಿದ್ದರಿಂದ ಸಾಧ‍್ಯವಾಗಲಿಲ್ಲ. ಮತ್ತೆ ಜನಸಂದಣಿ ಕಡಿಮೆಯಾದ ಬಳಿಕ ಮತ್ತೆ ಆವರಣಕ್ಕೆ ಬಂದು ಫೋಟೋ ತೆಗೆಯಲು ಬಂದೆವು. ಆಗ ಗಡಿಬಿಡಿಯಲ್ಲಿ ಚಪ್ಪಲಿ ತೆಗೆಯಲು ಮರೆತೆವು. ನಾವು ಆಗಾಗ ತಿರುಪತಿ ದೇವರ ಭಕ್ತರಾಗಿದ್ದು, ನಮ್ಮ ಮದುವೆ ಸುಸ್ರೂತ್ರವಾಗಿ ನಡೆಯಲಿ ಎಂದು ಕಳೆದ 30 ದಿನಗಳಲ್ಲಿ ಐದು ಬಾರಿ ದೇವಾಲಯಕ್ಕೆ ಬಂದಿದ್ದೇವೆ. ಹಾಗಿದ್ದರೂ ನಮ್ಮಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ವಿಘ್ನೇಶ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments