Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ನಟ ಸಿಂಬು ಮೇಲೆ ಕಿಡಿಕಾರಿದ ನಟ ಕರುಣಾಸ್

ಈ ಕಾರಣಕ್ಕೆ ನಟ ಸಿಂಬು ಮೇಲೆ ಕಿಡಿಕಾರಿದ ನಟ ಕರುಣಾಸ್
ಚೆನ್ನೈ , ಶನಿವಾರ, 9 ಜನವರಿ 2021 (10:25 IST)
ಚೆನ್ನೈ : ತಮಿಳಿನ ಖ್ಯಾತ ನಟ ಸಿಂಬು ಅಭಿನಯದ ಈಶ್ವರನ್ ಚಿತ್ರ ಇದೇ ಜನವರಿ 14ರಂದು ಮಕರ  ಸಂಕ್ರಾಂತಿಯ ವಿಶೇಷ ದಿನದಂದು ಬಿಡುಗಡೆಯಾಗುತ್ತಿದೆ. ಈ ನಡುವೆ ಇದೀಗ ನಟರೊಬ್ಬರು ನಟ ಸಿಂಬು ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೌದು. ಚಿತ್ರಮಂದಿರದಲ್ಲಿ ಸಂಕ್ರಾಂತಿಯಂದು ತಮಿಳು ಸ್ಟಾರ್ ನಟರಾದ ವಿಜಯ್ ಮತ್ತು ಸಿಂಬು ಅವರ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಕೇವಲ 50% ಸೀಟುಗಳಿಗೆ ಅವಕಾಶ ನೀಡಿತ್ತು. ಆದರೆ ಇತ್ತೀಚೆಗೆ ನಟ ಸಿಂಬು ಅವರು 100% ಸೀಟುಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ನಟ ಕರುಣಾಸ್ ಅವರು ಮಾತನಾಡಿ, ಸಿಂಬು 100% ಅಭಮಾನಿಗಳು ಚಿತ್ರಮಂದಿರಕ್ಕೆ ಬರಬೇಕು ಎಂದು ಭಾವಿಸುತ್ತಾರೆ. ಕೊರೊನಾ ಅವರಿಗೆ ಬಂದಿದ್ದರೆ ಅವರು ಅದರ ಪರಿಣಾಮ ತಿಳಿದು ಹೀಗೆ ಹೇಳುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಕೊರೊನಾ ಪರಿಣಾಮ ಸಂಪೂರ್ಣವಾಗಿ ಕಡಿಮೆಯಾಗದ ಕಾರಣ ಚಿತ್ರಮಂದಿರಗಳಲ್ಲಿ  100%  ಸೀಟುಗಳನ್ನು ನೀಡಬಾರದು ಎಂದು ಸಿಎಂ ಬಳಿ ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬೈ ನಲ್ಲಿ ಮೊದಲ ದಿನ ಅತಿ ಹೆಚ್ಚು ವೀಕ್ಷಿಸಿದ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?