Webdunia - Bharat's app for daily news and videos

Install App

ನನ್ನ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದವರಿಗೆ ಪ್ರಿಯಾಮಣಿ ಕೊಟ್ಟ ತಿರುಗೇಟು ಹೀಗಿದೆ

Sampriya
ಭಾನುವಾರ, 6 ಅಕ್ಟೋಬರ್ 2024 (18:40 IST)
Photo Courtesy X
ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರ ಸಂಬಂಧ ಟ್ರೋಲ್‌ನಲ್ಲಿರುತ್ತಾರೆ. ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗಿದ್ದಕ್ಕೆ ನನ್ನನ್ನು ಯಾಕೆ ಆಗಾಗ ಪ್ರಶ್ನೆ ಮಾಡುತ್ತಾರೆಂದು ನಟಿ ಪ್ರಿಯಾಮಣಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ತಫ ರಾಜ್‌ ಅವರೊಂದಿಗೆ ಪ್ರಿಯಾಮಣಿ ನಿಶ್ಚಿತಾರ್ಥ ಘೋಷಣೆಯಾಗುತ್ತಿದ್ದ ಹಾಗೇ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ಉಗ್ರರು ಆಗುತ್ತಾರೆಂದು ಹೇಳಿದ್ದರು.  ಇದೀಗ ಟೀಕೆ ಮಾಡಿದವರಿಗೆ ಪ್ರಿಯಾಮಣಿ ಖಡಕ್ ಉತ್ತರ ನೀಡಿದ್ದಾರೆ.

ಈಚೆಗೆ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಮಣಿ, ಅನ್ಯ ಧರ್ಮದ ಯುವಕನನ್ನು ಮದುವೆಯಾಗಿದ್ದ ವಿಚಾರವಾಗಿ ನನ್ನನ್ನೂ ಇಂದಿಗೂ ಕೂಡಾ ಟ್ರೋಲ್ ಮಾಡುತ್ತಿದ್ದಾರೆ. ಇದು ತುಂಬಾನೇ ನೋವಾಗುತ್ತದೆ.  ನಮ್ಮನೇ ಯಾಕೆ ಟಾರ್ಗೇಟ್ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ನಾನು ಈಚೆಗೆ  ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಹಂಚಿಕೊಂಡ ಫೋಟೋಗೆ ಭಾರೀ ನೆಗೆಟಿವ್ ಕಮೆಂಟ್‌ಗಳು ಬಂದಿದೆ. ನಾನು ಮುಸ್ಲಿಂ ಧರ್ಮಕ್ಕೆ ಮತಂತಾರವಾಗಿದ್ದೇನೆಂದು ಕಮೆಂಟ್ ಮಾಡಿದ್ದಾರೆ.

ಮುಸ್ಲಿಂ ಧರ್ಮಕ್ಕೆ ಮತಂತಾರವಾಗುವುದಿಲ್ಲ ಎಂದು ನಾನು ಮದುವೆಗೂ ಮುನ್ನಾ ಮುಸ್ತಫ ಅವರಲ್ಲಿ ಹೇಳಿದ್ದೆ. ನಾನು ಹುಟ್ಟು ಹಿಂದೂ. ನಾವಿಬ್ಬರು ಎರಡು ಧರ್ಮಗಳಿಗೂ ಮರ್ಯಾದೆ ಕೊಡುತ್ತೇವೆ.

ಪ್ರಿಯಾಮಣಿ ಅವರು ಉದ್ಯಮಿ ಮುಸ್ತಫ ರಾಜ್ ಎಂಬರನ್ನು ಪ್ರೀತಿಸಿ 2017ರಲ್ಲಿ ರಿಜಿಸ್ಟರ್ ಮದುವೆಯಾದರು. ಅಂದಿನಿಂದಲೂ ಈ ಜೋಡಿ ತಮ್ಮ ಧರ್ಮದ ವಿಚಾರವಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಲೇ ಇದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments