Select Your Language

Notifications

webdunia
webdunia
webdunia
webdunia

ಕುಟುಂಬ ಸಮೇತ ಅಣ್ಣಮ್ಮ ದೇವಿಯ ಆಶೀರ್ವಾದ ಪಡೆದ ದಿನಕರ್ ತೂಗುದೀಪ‍

ಕುಟುಂಬ ಸಮೇತ ಅಣ್ಣಮ್ಮ ದೇವಿಯ ಆಶೀರ್ವಾದ ಪಡೆದ ದಿನಕರ್ ತೂಗುದೀಪ‍

Sampriya

ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2024 (16:56 IST)
Photo Courtesy X
ಬೆಂಗಳೂರು: ಹತ್ಯೆ ಪ್ರಕರಣ ಸಂಬಂಧ ಬಂಧಿಯಾಗಿರುವ ನಟ ದರ್ಶನ್ ಅವರನ್ನು ಈ ಪ್ರಕರಣದಿಂದ ಹೊರಗೆ ತರಲು ಹೋರಾಡುತ್ತಿರುವವರಲ್ಲಿ ದಿನಕರ್ ತೂಗುದೀಪ ಸಹ ಒಬ್ಬರು. ಅಣ್ಣನ ಪರವಾಗಿ ಕಾನೂನಿನ ಹೋರಾಟದ ಜತೆಗೆ ದೇವರ ಮೊರೆ ಹೋಗುತ್ತಿದ್ದಾರೆ.

ನಿನ್ನೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗುತ್ತಿದ್ದ ಹಾಗೇ ಇಂದು ದಿನಕರ್ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಅಣ್ಣಮ್ಮ ದೇವಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು.

ಅತ್ತಿಗೆ ವಿಜಯಲಕ್ಷ್ಮಿ ಜತೆಗೆ ಆಗಾಗ ಬಳ್ಳಾರಿ ಜೈಲಿಗೆ ಆಗಮಿಸುತ್ತಿರುವ ದಿನಕರ್ ಅವರು ಹೇಗಾದರೂ ದರ್ಶನ್ ಅವರನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ.

ನಿನ್ನೆ ದಿನಕರ್ ಅವರು ತಮ್ಮ ರಾಯಲ್ ಸಿನಿಮಾ ಕಾರ್ಯಕ್ರಮದಲ್ಲಿ ದರ್ಶನ್ ಪರ ಅಭಿಮಾನಿಗಳು ಕೂಗಿದಾಗ, ನಿಮ್ಮ ಪ್ರೀತಿ ಹಾರೈಕೆ ಇರುವವರೆಗೂ ಡಿಬಾಸ್‌ಗೆ ಯಾರು ಏನೂ ಮಾಡಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಇದುವರೆಗೂ ದರ್ಶನ್ ಕುಟುಂಬದವರು ಬಹಿರಂಗವಾಗಿ ಎಲ್ಲೂ ದರ್ಶನ್ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಚಪ್ಪಲಿ ಧರಿಸದೇ ಬರಲು ಇವರೇ ಕಾರಣ