Select Your Language

Notifications

webdunia
webdunia
webdunia
webdunia

ಜೂ.ಎನ್ ಟಿಆರ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಯ್ತು ಈ ಡೈಲಾಗ್

ಜೂ.ಎನ್ ಟಿಆರ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಯ್ತು ಈ ಡೈಲಾಗ್
ಹೈದರಾಬಾದ್ , ಸೋಮವಾರ, 3 ಆಗಸ್ಟ್ 2020 (12:19 IST)
ಹೈದರಾಬಾದ್ : ಸಿನಿಮಾವೊಂದರ ಡೈಲಾಗ್ ಇದೀಗ ನಟ ಜೂ.ಎನ್ ಟಿಆರ್ ಮತ್ತು ನಟ ಮಹೇಶ್ ಬಾಬು ಅಭಿಮಾನಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.

ಹೌದು, ಮಹಾ ವೆಂಕಟೇಶ್ ನಿರ್ದೇಶನದ ‘ಉಮಾ ಮಹೇಶ್ವರಿ ಉಗ್ರ ರೂಪಸ್ಯ’ ಎಂಬ ತೆಲುಗು ಚಿತ್ರ ಒಟಿಟಿಯಲ್ಲಿ ತೆರೆಕಂಡಿದೆ. ಈ ಚಿತ್ರದಲ್ಲಿ ಜೂ.ಎನ್ ಟಿಆರ್ ನಾಯಕನಾಗಿ ನಟಿಸಿದ್ದಾರೆ. ಇದರಲ್ಲಿ ಯುವತಿಯೊಬ್ಬಳು ಜೂ.ಎನ್ ಟಿಆರ್ ಅಭಿನಯದ ಸಿಂಹಾದ್ರಿ ಚಿತ್ರದ ಫೈಟಿಂಗ್ ನೋಡುತ್ತಿರುವಾಗ ಹಾಸ್ಯ ನಟ ಸುಹಾಸ್ ಬಂದು ಯುವತಿಯ ಬಳಿ ನೀನು ಜೂ.ಎನ್ ಟಿಆರ್ ಅಭಿಮಾನಿಯೇ ಎಂದು ಕೇಳುತ್ತಾರೆ. ಅದಕ್ಕೆ ಆ ಯುವತಿ ಅಲ್ಲ ಮಹೇಶ್ ಬಾಬು ಅಭಿಮಾನಿ ಎಂದು ಹೇಳುತ್ತಾಳೆ.

ಇದಕ್ಕೆ ನಟ ಸುಹಾಸ್ ಮಹೇಶ್ ಬಾಬು ಒಬ್ಬ ಸೋಮಾರಿ ನಟ, ಒಂದೆ ಜಾಗದಲ್ಲಿ ನಿಂತು ಫೈಟ್ ಮಾಡುತ್ತಾರೆ ಆದರೆ ಜೂ.ಎನ್ ಟಿಆರ್ ಎಲ್ಲಾ ಕಡೆ ಗುಗ್ಗಿ ಹೊಡೆಯುತ್ತಾರೆ ಎಂದು ಹೇಳುತ್ತಾರೆ. ಈ ಡೈಲಾಗ್ ಮಹೇಶ್ ಬಾಬು ಅಭಿಮಾನಿಗಳ ಆಕ್ರೋಶ ಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ ಬಳಿಕ ಮತ್ತೊಬ್ಬ ಸ್ಟಾರ್ ನಟನ ಬಗ್ಗೆ ಸಿನಿಮಾ ಮಾಡಲು ಹೊರಟ ಆರ್ ಜಿವಿ