Select Your Language

Notifications

webdunia
webdunia
webdunia
Wednesday, 9 April 2025
webdunia

ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿದ ಆರೋಪಕ್ಕೆ ಈ 6 ಮಂದಿ ಮುಖ್ಯ ಸಾಕ್ಷಿಯಂತೆ

ಬೆಂಗಳೂರು
ಬೆಂಗಳೂರು , ಭಾನುವಾರ, 28 ಅಕ್ಟೋಬರ್ 2018 (07:10 IST)
ಬೆಂಗಳೂರು : ನಟಿ ಶೃತಿ ಹರಿಹರನ್ ಈಗಾಗಲೇ ನಟ ಅರ್ಜುನ್ ಸರ್ಜಾ ಅವರ  ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ, ಹಾಗೇ ಅವರ ಈ ಆರೋಪಕ್ಕೆ ಇದೀಗ 6 ಮಂದಿಯನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ.


ಬೆಂಗಳೂರಿನ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ವಿಸ್ಮಯ ಶೂಟಿಂಗ್ ನಲ್ಲಿ ಅರ್ಜುನ್ ಸರ್ಜಾ ಅವರು ತನ್ನ ಜೊತೆ ಅಸಭ್ಯವಾಗಿ ವರ್ತಿಸಿದಕ್ಕೆ ಬೇಸರಗೊಂಡಿದ್ದ ತನ್ನನ್ನು ತನ್ನ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಸಮಾಧಾನ ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದರು. ಹಾಗೇ ಇದೆಲ್ಲವನ್ನು ಸಹಾಯಕ ನಿರ್ದೇಶಕ ಭರತ್ ನೀಲಕಂಠ ಮತ್ತು ಮೋನಿಕಾ ಹಾಗೂ ತಮ್ಮ ಗೆಳತಿ ಯಶಸ್ವಿನಿ ಬಳಿ ಹೇಳಿ ಕಣ್ಣೀರಿಟ್ಟಿದ್ದೆ ಎಂಬುದಾಗಿ ತಿಳಿಸಿದ್ದರು.


ಅಲ್ಲದೇ ಅರ್ಜುನ್ ಸರ್ಜಾ ಅವರು ರೆಸಾರ್ಟ್‍ಗೆ ಬಾ. ನಾವಿಬ್ಬರೂ ಖುಷಿಪಡೋಣ ಎಂದು ಶೃತಿ ಹರಿಹರನ್ ಬಳಿ ಸೆಕ್ಸಿ ಡೈಲಾಗ್  ಹೊಡೆದಾಗ ಆ ವೇಳೆ ತನ್ನ ಜೊತೆ ಬೋರೇಗೌಡ, ಕಿರಣ್ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದಕಾರಣ ಇದೀಗ  ಶೃತಿ ಹರಿಹರನ್ ಆರೋಪಕ್ಕೆ ವಿಸ್ಮಯ ಸಿನಿಮಾದ ನಿರ್ದೇಶಕ ಅರುಣ್ ವೈದ್ಯನಾಥನ್, ಸಹಾಯಕ ನಿರ್ದೇಶಕ ಭರತ್ ನೀಲಕಂಠ, ಮೋನಿಕಾ, ಶೃತಿ ಹರಿಹರನ್ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಹಾಗೂ ಗೆಳತಿ ಯಶಸ್ವಿನಿ ಅವರನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಆದಕಾರಣ ಈ 6 ಮಂದಿ ನೀಡುವ ಹೇಳಿಕೆಯ ಮೇಲೆ ನಟ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ; ಶೃತಿ- ಚೇತನ್ ರನ್ನು ಖಡಕ್ ಆಗಿ ಪ್ರಶ್ನಿಸಿದ ಐಶ್ವರ್ಯಾ ಸರ್ಜಾ