Select Your Language

Notifications

webdunia
webdunia
webdunia
webdunia

ನಾನು ಚೆನ್ನಾಗಿದ್ದೇನೆ, ದೇವಸ್ಥಾನಕ್ಕೆ ಬಂದಿದ್ದಾಗ ಬಸ್ ಸಿಗದೆ ತೊಂದರೆ ಆಗಿತ್ತು: ಸದಾಶಿವ ಬ್ರಹ್ಮಾವರ್

ನಾನು ಚೆನ್ನಾಗಿದ್ದೇನೆ, ದೇವಸ್ಥಾನಕ್ಕೆ ಬಂದಿದ್ದಾಗ ಬಸ್ ಸಿಗದೆ ತೊಂದರೆ ಆಗಿತ್ತು: ಸದಾಶಿವ ಬ್ರಹ್ಮಾವರ್
ಕುಮಟಾ , ಬುಧವಾರ, 16 ಆಗಸ್ಟ್ 2017 (11:27 IST)
ಪೋಷಕ ಪಾತ್ರಗಳ ಮೂಲಕ ಕನ್ನಡ ಹಿರಿತೆರೆ ಮೇಲೆ ಛಾಪು ಮೂಡಿಸಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸಂಕಷ್ಟದಲ್ಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಾನು ಚೆನ್ನಾಗಿದ್ದೇನೆ, ಮಕ್ಕಳು ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕುಮಟಾದಲ್ಲಿ ಬೀದಿಯಲ್ಲಿ ದಾರಿಕಾಣದೇ ನಿಂತಿದ್ದ ಬ್ರಹ್ಮಾವರ್ ಅವರಿಗೆ ಸ್ಥಳೀಯರು ಊಟ ಕೊಡಿಸಿ ಊರಿಗೆ ಕಳುಹಿಸಿದ್ದರು. ಇದರಿಂದ ಬ್ರಹ್ಮಾವರ್ ಅವರು ಸಂಕಷ್ಟದಲ್ಲಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸದಾಶಿವ ಬ್ರಹ್ಮಾವರ್, ದೇವಸ್ಥಾನಕ್ಕೆ ಒಬ್ಬೊಬ್ಬನೇ ಹೋಗುವ ಚಟವಿದೆ. ದೇಗುಲಕ್ಕೆ ಹೋದಾಗ ಇದ್ದ ಹಣವೆಲ್ಲ ಹುಂಡಿಗೆ ಹಾಕಿಬಿಡುತ್ತೇನೆ. ಇದರಿಂದಾಗಿ ಸಮಸ್ಯೆಗೆ ತುತ್ತಾಗುತ್ತೇನೆ. ಕುಮಟಾದಲ್ಲಿ ನನ್ನನ್ನ ಗಮನಿಸಿದ ಶಾಲಾ ಮಕ್ಕಳು ಹೋಟೆಲ್`ಗೆ ಕರೆದೊಯ್ದು ಊಟ ಕೊಡಿಸಿ ಬಸ್`ನಲ್ಲಿ ಬ್ರಹ್ಮಾವರದವರೆಗೆ ಬಂದು ಬಿಟ್ಟು ಹೋದರು ಎಂದು ಹೇಳಿದ್ದಾರೆ.

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಸಂಕಷ್ಟದಲ್ಲಿದ್ದಾರೆ ಎಂಬ ವರದಿ ಪ್ರಸಾರವಾಗುತ್ತಿದ್ದಂತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ನೆರವು ನೀಡುವುದಾಗಿ ಮುಂದೆ ಬಂದಿದ್ದರು. ತಮಗೆ ನೆರವು ನೀಡಲು ಮುಂದಾಗಿದ್ದ ಶಿವಣ್ಣ ಮತ್ತು ಸುದೀಪ್`ಗೆ ಸದಾಶಿವ ಬ್ರಹ್ಮಾವರ್ ಧನ್ಯವಾದ ತಿಳಿಸಿದ್ದಾರೆ. ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಗುಡುಗಿದ ಕಮಲ್ ಹಾಸನ್