Select Your Language

Notifications

webdunia
webdunia
webdunia
webdunia

ಮತ್ತೆ ಗುಡುಗಿದ ಕಮಲ್ ಹಾಸನ್

ಮತ್ತೆ ಗುಡುಗಿದ ಕಮಲ್ ಹಾಸನ್
ಚೆನ್ನೈ , ಬುಧವಾರ, 16 ಆಗಸ್ಟ್ 2017 (10:51 IST)
ಚೆನ್ನೈ: ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತೊಮ್ಮೆ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 
ಸ್ವಾತಂತ್ರ್ಯೋತ್ಸವ ದಿನ ಟ್ವೀಟ್ ಮಾಡಿರುವ ಕಮಲ್ ಹಾಸನ್ ‘ಭ್ರಷ್ಟ ಆಡಳಿತ ನಡೆಸುತ್ತಿರುವ ಸಿಎಂ ಇ. ಪಳನಿಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು. ಅವರ ರಾಜೀನಾಮೆಗೆ ಯಾರೂ ಆಗ್ರಹಿಸದಿರುವುದು ನಿಜಕ್ಕೂ ಅಚ್ಚರಿಯಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೊಮ್ಮೆ ಕಮಲ್ ಹಾಸನ್ ಆಡಳಿತಾರೂಢ ಡಿಎಂಕೆ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಅದಾದ ಮೇಲೆ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ದಟ್ಟವಾಗಿತ್ತು. ಇನ್ನೊಂದು ಮೂಲಗಳ ಪ್ರಕಾರ ಅವರು ಡಿಎಂಕೆ ಸೇರಬಹುದು ಎಂದೂ ಸುದ್ದಿ ಹಬ್ಬಿತ್ತು. ಇದೀಗ ಮತ್ತೆ ಆಡಳಿತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದು ಅವರ ರಾಜಕೀಯ ಸೇರ್ಪಡೆ  ವಿಚಾರಕ್ಕೆ ಮತ್ತಷ್ಟು ರೆಕ್ಕೆ  ಪುಕ್ಕ ಹುಟ್ಟಿಕೊಂಡಿದೆ.

ಇದನ್ನೂ ಓದಿ.. ಕರುಣಾನಿಧಿ ಆಸ್ಪತ್ರೆಗೆ ದಾಖಲು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ಪ್ರಭಾಸ್ ರೊಮ್ಯಾನ್ಸ್ ಮಾಡೋ ಹುಡುಗಿ ಪಕ್ಕಾ!