Webdunia - Bharat's app for daily news and videos

Install App

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರ ಬೈಗುಳಗಳ ಸುರಿಮಳೆ, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ

Sampriya
ಬುಧವಾರ, 25 ಸೆಪ್ಟಂಬರ್ 2024 (17:33 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಆರಂಭದಿಂದಲೂ ಸೀರಿಯಲ್ ಪ್ರಿಯರಿಗೆ ಮನರಂಜನೆಯನ್ನು ನೀಡುತ್ತಲೇ ಬಂದಿದೆ. ಟಾಪ್‌ ರೇಟಿಂಗ್‌ನಲ್ಲಿ ಪ್ರಸಾರವಾಗುತ್ತಿರುವ ಈ ಸೀರಿಯಲ್‌ನ ಟ್ವಿಸ್ಟ್‌ ವೀಕ್ಷಕರು ಅಸಮಾಧಾನಗೊಂಡಿದ್ದರು.

ತುಳಸಿ ಗರ್ಭಿಣಿಯಾದ ವಿಚಾರಕ್ಕೆ ವೀಕ್ಷಕರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ನಿರ್ದೇಶಕರೆ ಇದನ್ನೆಲ್ಲ ನೋಡಲು ಅಸಹ್ಯವಾಗುತ್ತಿದೆ, ಪ್ಲೀಸ್ ಕಥೆ ಚೇಂಜ್ ಮಾಡಿ ಎಂದು ಕಮೆಂಟ್‌ಗಳ ಸುರಿಮಳೆ ಗೈದಿದ್ದಾರೆ. ಧಾರವಾಹಿಯ ಕಥೆ ಬದಲಾಯಿಸುವಂತೆ ಒತ್ತಾಯ ಜಾಸ್ತಿಯಾಗುತ್ತಿದ್ದ ಬೆನ್ನಲ್ಲೇ ಕಥೆಗೆ ಹೊಸ ಟ್ವಿಸ್ಟ್ ನೀಡಲಾಗಿದೆ.

ವೈದ್ಯಕೀಯ ಪರೀಕ್ಷೆ ವೇಳೆ ಮಗುವಿನ ಬೆಳವಣಿಗೆ ಸರಿಯಿಲ್ಲದ ಕಾರಣ ವೈದ್ಯರು ಮಗುವನ್ನು ಅಬಾರ್ಟ್ ಮಾಡಲು ಸೂಚಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ್ದಲ್ಲಿ ತುಳಸಿ ಹಾಗೂ ಮಗುವಿನ ಜೀವಕ್ಕೆ ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿ ಮಾಧವ ಹಾಗೂ ತುಳಸಿ ಶಾಕ್ ಆಗಿದ್ದಾರೆ.

ಈ ಪ್ರೋಮೋ ನೋಡಿದವರು ಚೆನ್ನಾಗಿ ಡೈರೆಕ್ಟರ್‌ಗೆ ಬೈದಿರೋದಕ್ಕೆ ಕಥೆನೆ ಚೇಂಜ್ ಮಾಡಿದ್ದಾರೆ. ಒಳ್ಳೆ ಕೆಲಸ, ಸುಧಾರಾಣಿ ಅವರ ವ್ಯಕ್ತಿತ್ವಕ್ಕೆ ಇದು ಶೋಭೆಯಲ್ಲ ಎಂದಿದ್ದಾರೆ.

ಮತ್ತೊಬ್ಬರು ಈ ವಯಸ್ಸಿನಲ್ಲಿ ಮಗು ಆಗುವುದು ಚೆನ್ನಾಗಿರುವುದಿಲ್ಲ ಅದಕ್ಕಾಗಿ ದಯವಿಟ್ಟು ಮಗುವನ್ನು ಅಬಾರ್ಟ್ ಮಾಡಿ, ಕತೆಯನ್ನು ಮುಂದುವರೆಸಿ ಎಂದಿದ್ದಾರೆ.

ಪ್ರೇಕ್ಷಕರ ಒತ್ತಾಯದ ಮೇರೆ ಸ್ಟೋರಿ ಚೇಂಜ್,  ಮತ್ತೊಬ್ಬರು ಥೂ ಕರ್ಮ, ಯಾವ ದರಿದ್ರ ಕಥೆನೋ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.

ಕಥೆ ಈ  ರೀತಿಯಾಗಲು ತಿರುಗಲು ನೆಟ್ಟಿಗರ ಕಮೆಂಟ್ಸ್ ಕಾರಣ ಎಂದಿದ್ದಾರೆ. ಒಟ್ಟಾರೆ ತುಳಸಿ ಮಗು ತೆಗೆಯಲು ಹೇಳಿದ್ದು ಶ್ರೀರಸ್ತು ಶುಭಮಸ್ತು ಸೀರಿಯಲ್ ಪ್ರಿಯರಿಗೆ ಖುಷಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ಮುಂದಿನ ಸುದ್ದಿ
Show comments