Select Your Language

Notifications

webdunia
webdunia
webdunia
webdunia

ಹಾರ, ತುರಾಯಿ ಹಿಡಿದು ಕಾದಿದ್ದ ದರ್ಶನ್‌ ಫ್ಯಾನ್ಸ್‌ಗೆ ನಿರಾಸೆ, ಏನಿದೆ ಕೋರ್ಟ್‌ ತೀರ್ಪು

Actor Darshan Bail Hearing, Darshan Fans, Pavitra Gowda,

Sampriya

ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2024 (17:40 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಹಾಗೂ ಎ1 ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.  ಈ ಮೂಲಕ ಕಾನೂನು ಅಡಿಯಲ್ಲಿ ದರ್ಶನ್‌ಗೆ ಹಿನ್ನಡೆಯಾಗಿದೆ. ಇದರಿಂದ ಇನ್ನಷ್ಟು ದಿನ ಈ ಆರೋಪಿಗಳು ಜೈಲಿನಲ್ಲೇ ದಿನ ಕಳೆಯಬೇಕಿದೆ.

ಇಂದು ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್  ಅವರ ಅರ್ಜಿ ವಿಚಾರಣೆ ನಡೆದಿದೆ.  ಆದರೆ ಎ13 ದೀಪಕ್ ಹೊರತು ಪಡಿಸಿ ಎಲ್ಲ ಆರೋಪಿಗಳ ಅರ್ಜಿ ವಜಾ ಮಾಡಿದೆ.  

ದರ್ಶನ್ ಅವರ ಅರ್ಜಿ ವಿಚಾರಣೆ ವಾದ ಪ್ರತಿವಾದ ಅಂತ್ಯಗೊಂಡ ಹಿನ್ನೆಲೆ ತೀರ್ಪನ್ನು ಇಂದಿಗೆ ಕೋರ್ಟ್‌ ಕಾಯ್ದಿರಿಸಿತ್ತು.  ಇನ್ನೂ ದರ್ಶನ್‌ಗೆ ಜಾಮೀನು ಸಿಗುವ ನಿರೀಕ್ಷೆ ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿತ್ತು. ಆದರೆ ಇದೀಗ ವರಿಗೆ ಭಾರೀ ನಿರಾಸೆಯಾಗಿದೆ.

ದರ್ಶನ್ ಅವರಿಗೆ ನವರಾತ್ರಿ ಮುಗಿಯುವುದರೊಳಗೆಯೇ ಬಿಡುಗಡೆ ಭಾಗ್ಯ ಪಡೆಯುತ್ತಾರೆಂಬ ನಂಬಿಕೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಅದಲ್ಲದೆ ಈಚೆಗೆ ಪತ್ಬಿ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ  ಪೋಸ್ಟ್‌ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಗೆ ಬಂದ್ರು, ದರ್ಶನ್‌ರನ್ನು ಭೇಟಿಯಾಗದ ಪತ್ನಿ, ಕುತೂಹಲ ಮೂಡಿಸಿದ ವಿಜಯಲಕ್ಷ್ಮಿ ನಡೆ