Select Your Language

Notifications

webdunia
webdunia
webdunia
webdunia

ಧನ್ವೀರ್ ಮಾತನಾಡಿಸಲು ಸಪ್ಪೆ ಮುಖದಲ್ಲೇ ಹೊರಬಂದ ನಟ ದರ್ಶನ್

ಧನ್ವೀರ್ ಮಾತನಾಡಿಸಲು ಸಪ್ಪೆ ಮುಖದಲ್ಲೇ  ಹೊರಬಂದ ನಟ ದರ್ಶನ್

Sampriya

ಬಳ್ಳಾರಿ , ಸೋಮವಾರ, 14 ಅಕ್ಟೋಬರ್ 2024 (16:53 IST)
ಬಳ್ಳಾರಿ: ಇಂದು ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್ ಅವರು ಭೇಟಿಗೆ ಬಂದ ನಟ ಧನ್ವೀರ್, ಸುಶಾಂತ್ ಅವರನ್ನು ಮಾತನಾಡಿಸಲು ಸೆಲ್‌ನಿಂದ ಸಪ್ಪೆ ಮುಖದಲ್ಲೇ ಹೊರಬಂದಿದ್ದಾರೆ.

ಕಳೆದ ಬಾರಿ ಸೆಲ್‌ನಿಂದ ದರ್ಶನ್ ಹೊರಬರುತ್ತಿದ್ದ ಹಾಗೇ ಡಿಬಾಸ್ ಡಿಬಾಸ್ ಎಂದು ಅಭಿಮಾನಿಗಳು ಘೋಷಣೆ ಕೂಗಿದಾಗ, ನಗುತ್ತಲೇ ದರ್ಶನ್ ಎದೆ ಮುಟ್ಟಿ, ನೀವು ಹೃದಯದಲ್ಲಿದ್ದೀರಿ ಎಂದು ಸನ್ನೆ ಮಾಡಿದ್ದರು. ಆದರೆ ಈ ಬಾರಿ ದರ್ಶನ್ ಮುಖದಲ್ಲಿ ಅಷ್ಟೇನೂ ನಗು ಇರಲಿಲ್ಲ.

ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ವಾದ ವಿವಾದ ಅಂತ್ಯಗೊಂಡಿದ್ದು, ಕೋರ್ಟ್‌ ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ. ಇನ್ನು ದರ್ಶನ್‌ಗೆ ಜಾಮೀನು ಸಿಗುವ ನಿರೀಕ್ಷೆ ಹಿನ್ನೆಲೆ ಅವರ ನೂರಾರು ಅಭಿಮಾನಿಗಳು ಬಳ್ಳಾರಿ ಜೈಲು ಮುಂದೆ ಜಮಾಯಿಸಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಾ, ಬಾಸ್‌ಗೆ ಜಾಮೀನು ಪಕ್ಕಾ ಎನ್ನುತ್ತಿದ್ದಾರೆ.

ಇದರ ಬೆನ್ನಲ್ಲೇ ದರ್ಶನ್ ಅವರನ್ನು ಮಾತನಾಡಿಸಲು ಧನ್ವೀರ್ ಅವರು ಬಂದಿದ್ದಾರೆ. ದರ್ಶನ್‌ಗೆ ಒಂದು ಬ್ಯಾಗ್‌ನಲ್ಲಿ ಬಟ್ಟೆ, ಬಿಸ್ಕೆಟ್, ಡ್ರೈ ಪ್ರೂಟ್ಸ್‌ ಅನ್ನು ತಂದಿದ್ದಾರೆ. ಇನ್ನೂ ಧನ್ವೀರ್ ಕಾರಿನಿಂದ ಇಳಿಯುತ್ತಿದ್ದ ಹಾಗೇ ಡಿಬಾಸ್, ಡಿಬಾಸ್ ಎಂದು ಫ್ಯಾನ್ಸ್‌ಗೆ ಘೋಷಣೆ ಕೂಗಿದ್ದಾರೆ.  ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಭಿಮಾನಿಗಳನ್ನು ಚದುರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ಗೆ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ: ಸಾನ್ವಿ ಸುದೀಪ್