Select Your Language

Notifications

webdunia
webdunia
webdunia
webdunia

ಜೈಲಿನಿಂದಲೇ ಫ್ಯಾನ್ಸ್‌ಗೆ ಎದೆ ಮುಟ್ಟಿ ಸಂದೇಶ ರವಾನಿಸಿದ ನಟ ದರ್ಶನ್

Actor Darshan Thoogudeepa Bail Hearing, Pavitra Gowda Bail Hearing, Darshan Middle Finger,

Sampriya

ಬೆಂಗಳೂರು , ಗುರುವಾರ, 10 ಅಕ್ಟೋಬರ್ 2024 (15:24 IST)
Photo Courtesy X
ಬೆಂಗಳೂರು: ದಸರಾ ಮುಗಿಯುವುದರೊಳಗೆ ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್ ಅವರನ್ನು ಇಂದು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಅವರು ಭೇಟಿಯಾದರು. ಇನ್ನೂ ಭೇಟಿಗೆ ಬಂದ ವೇಳೆ ದರ್ಶನ್‌ಗೆ ಡ್ರೈ ಫ್ರೂಟ್ಸ್‌, ಬಿಸ್ಕೆಟ್ ತಂದಿದ್ದಾರೆ.

ದರ್ಶನ್ ಅವರು ವಿ ಹರಿಕೃಷ್ಣ ಅವರನ್ನು ಮಾತನಾಡಿಸಲು ಸಂದರ್ಶಕರ ಕೊಠಡಿಗೆ ಬರುವಾಗ ನಗು ಮುಖದಿಂದಲೇ ಬಂದಿದ್ದಾರೆ. ಆದರೆ ತೀವ್ರವಾದ ಬೆನ್ನು ನೋವು ಇದೆ ಎಂದು ಫ್ಯಾನ್ಸ್‌ಗೆ ತೋರಿಸಿದ್ದಾರೆ.

ಅದಲ್ಲದೆ ಫ್ಯಾನ್ಸ್ ನೋಡಿ ಸನ್ನೆ ಮಾಡಿದ್ದಾರೆ. ಎದೆ ಮುಟ್ಟಿ, ಫ್ಯಾನ್‌ ಕಡೆ ಕೈ ತೋರಿಸಿದ್ದಾರೆ. ನನ್ನ ಸೆಲೆಬ್ರಿಟಿಸ್‌ಗಳು ಹೃದಯಲ್ಲಿದ್ದೀರಿ ಎಂದು ಸನ್ನೆ ಮಾಡಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಸದ್ಯ ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅವರ ಎದೆ ಮೇಲಿರೋ ಅಕ್ಷರಗಳನ್ನು ಅಳಿಸೋಕೆ ಆಗಲ್ಲ, ನಮ್ಗೆ ಅವರ ಮೇಲಿರುವ ಅಭಿಮಾನ ಬೀಳಿಸೋಕೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತೇ ಕೆಲವರು ಬಾಸ್‌ ಆದಷ್ಟು ಬೇಗ ಜೈಲಿಂದ್ದ ಹೊರ ಬರುವ ಸೂಚನೆ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನಮ್ಮಂತ ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಇನ್ನೇನು ನೀವೆಲ್ಲರೂ ನನ್ನ ಮನಸಲ್ಲಿ ಇದ್ದೀರಾ ಅಂತ ಹೇಳಿದ್ರಲ್ವಾ  ನಮ್ಮ ಡಿಬಾಸ್ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಚಕ ಘಟ್ಟದಲ್ಲಿ ಜಾಮೀನು ಅರ್ಜಿ ವಿಚಾರಣೆ, ಈ ಒಂದು ಪಾಯಿಂಟ್‌ನಿಂದ ದರ್ಶನ್‌ಗೆ ಇಂದು ಸಿಗುತ್ತಾ ಬೇಲ್