Select Your Language

Notifications

webdunia
webdunia
webdunia
webdunia

ಕಾಲಿಗೆ ನಮಸ್ಕರಿಸಿದ ತರುಣ್ ಸುಧೀರ್- ಸೋನಾಲ್‌ಗೆ 'ಶೀಘ್ರ ಮೇವ ಸಂತಾನ ಪ್ರಾಪ್ತಿರಸ್ತು' ಎಂದಾ ಪ್ರೇಮ್

ಕಾಲಿಗೆ ನಮಸ್ಕರಿಸಿದ ತರುಣ್ ಸುಧೀರ್- ಸೋನಾಲ್‌ಗೆ 'ಶೀಘ್ರ ಮೇವ ಸಂತಾನ ಪ್ರಾಪ್ತಿರಸ್ತು' ಎಂದಾ ಪ್ರೇಮ್

Sampriya

ಬೆಂಗಳೂರು , ಭಾನುವಾರ, 11 ಆಗಸ್ಟ್ 2024 (15:53 IST)
Photo Courtesy X
ಬೆಂಗಳೂರು: ಅಣ್ಣಂದಿರ ಹಾಗೇ ಮದುವೆಯನ್ನು ನಡೆಸಿಕೊಟ್ಟ ನಟ ಪ್ರೇಮ್ ಹಾಗೂ ಶರಣ್ ದಂಪತಿಗೆ ಕಾಲಿಗೆ ಬಿದ್ದು ತರುಣ್ ಸುಧೀರ್ ಹಾಗೂ ಸೋನಾಲ್ ಅವರು ಆಶೀರ್ವಾದ ಪಡೆದರು.

ನಿಮ್ಮಿಬ್ಬರ ಆಶೀರ್ವಾದ ಬೇಕೆ ಎಂದಾ ತರುಣ್ ಸುಧೀರ್ ಅವರು ದಂಪತಿಗಳ ಕಾಲನ್ನು ಮುಟ್ಟಿ ನಮಸ್ಕರಿಸಿದ್ದಾರೆ. ನಟ ಪ್ರೇಮ್, ಶರಣ್ ಹಾಗೂ ತರುಣ್ ಸುಧೀರ್ ಸ್ನೇಹಿತರಾಗಿದ್ದು, ಸಿನಿಮಾಗಳಿಗಿಂತಲೂ ತಮ್ಮ ವೈಯಕ್ತಿಕ ಬದುಕಿನಲ್ಲಿ ತುಂಬಾನೇ ಹತ್ತಿರವಾಗಿರುವವರು.

ತರುಣ್ ಸುಧೀರ್ ಹಾಗೂ ಸೋನಾಲ್ ಅರಿಶಿನ ಶಾಸ್ತ್ರ ಸಮಾರಂಭದಿಂದ ಹಿಡಿದು ಇಂದಿನ ಮದುವೆ ಸಮಾರಂಭದವರೆಗೂ ಪ್ರೇಮ್ ಹಾಗೂ ಶರಣ್ ಕುಟುಂಬ ಭಾಗಿಯಾಗಿ ಎಲ್ಲ ಮುಂದೆ ನಿಂತು ನೆರವೇರಿಸಿದ್ದಾರೆ. ತನ್ನ ಸಹೋದರ ಮದುವೆಯಂತೆ ನಡೆಸಿಕೊಟ್ಟ ಪ್ರೇಮ್ ಹಾಗೂ ಶರಣ್ ಅವರು ಮ್ಯಾಚಿಂಗ್ ಬಟ್ಟೆಯಲ್ಲಿ ಮಿಂಚಿದರು.

ಆಶೀರ್ವಾದ ಮಾಡುವ ವೇಳೆ ಲವ್ಲಿ ಸ್ಟಾರ್ ಪ್ರೇಮ್ ಅವರು ತರುಣ್-ಸೋನಾಲ್ ಕಾಲೆಳೆದು ಆದಷ್ಟು ಬೇಗ ಮಗುವಾಗಲಿ ಎಂದು ಕಾಲೆಳೆದರು. ಶೀಘ್ರ ಮೇವಾ ಸಂತಾನ ಪ್ರಾಪ್ತಿರಸ್ತು ಎಂದು ದಂಪತಿಗಳಿಗೆ ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅವರ ಆಶೀರ್ವಾದ ನಮ್ಮೇಲಿದೆ: ದರ್ಶನ್ ಅನುಪಸ್ಥಿತಿಗೆ ಭಾವುಕರಾದ ತರುಣ್ ಸುಧೀರ್- ಸೋನಾಲ್