Webdunia - Bharat's app for daily news and videos

Install App

Darshan: ದರ್ಶನ್ ಆಂಡ್ ಗ್ಯಾಂಗ್ ಗೆ ಲಾಭವಾಯ್ತು ಸುಪ್ರೀಂಕೋರ್ಟ್ ನ ಈ ವಿಚಾರ

Krishnaveni K
ಬುಧವಾರ, 21 ಮೇ 2025 (12:25 IST)
ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಸುಪ್ರೀಂಕೋರ್ಟ್ ನ ಈ ಒಂದು ವಿಚಾರ ಈಗ ಲಾಭವಾಗಿ ಪರಿಣಮಿಸಿದೆ. ಅದೇನದು ನೋಡಿ.

ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್  ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಈಗ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.

ಕಳೆದ ಬಾರಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಮೇಗೆ ಮುಂದೂಡಿಕೆ ಮಾಡಿತ್ತು. ಈಗ ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ಮತ್ತೆ ವಿಚಾರಣೆ ಮುಂದೂಡಿದೆ. ಈಗ ಸುಪ್ರೀಂಕೋರ್ಟ್ ಗೆ ಬೇಸಿಗೆ ರಜೆ ನಡೆಯುತ್ತಿದೆ. ಜುಲೈ 14ರವರೆಗೂ ರಜೆಯಿರಲಿದೆ. ಹೀಗಾಗಿ ಅಲ್ಲಿಯವರೆಗೆ ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ದರ್ಶನ್ ಆಂಡ್ ಗ್ಯಾಂಗ್ ಈಗಿನಂತೇ ಆರಾಮವಾಗಿ ಹೊರಗೆ ಓಡಾಡಿಕೊಂಡಿರಲು ಅವಕಾಶ ನೀಡಲಾಗಿದೆ.

ಇನ್ನು ಕೇಸ್ ಗೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದ ಅಧಿಕಾರಿಗಳು 132 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಪಟ್ಟಣಗೆರೆ ಶೆಡ್ ನಲ್ಲಿ ಕೃತ್ಯದ ಬಳಿಕ ತೆಗೆಸಿದ್ದ ಫೋಟೋ ದಾಖಲೆಯೂ ಇದೆ. ಮುಂದಿನ ವಿಚಾರಣೆ ವೇಳೆ ಈ ವಿಚಾರವನ್ನೂ ಸುಪ್ರೀಂಕೋರ್ಟ್ ಮುಂದೆ ವಾದಿಸುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರೀತಿಯಲ್ಲಿ ಬಿದ್ರಾ ಶ್ರೀಲೀಲಾ, ಡಿನ್ನರ್ ಪಾರ್ಟಿಯಲ್ಲಿ ಸಹನಟನ ಜತೆ ಸಿಕ್ಕಿಬಿದ್ದ ಕಿಸ್ ಬೆಡಗಿ

ಡೆವಿಲ್ ಮೇಕಿಂಗ್ ವಿಡಿಯೋದಲ್ಲಿ ವಿನೀಶ್ ಭಾಗಿ: ದರ್ಶನ್ ಪುತ್ರನ ಎಂಟ್ರಿ ಬಗ್ಗೆ ಇಲ್ಲಿದೆ ಅಪ್ಡೇಟ್ಸ್‌

ದೀಪಿಕಾ ಪಡುಕೋಣೆಗೆ 2026ರ ಹಾಲಿವುಡ್ ವಾಕ್ ಆಫ್‌ ಫೇಮ್ ಗೌರವ, ಆದರೆ ಈಕೆಯೇ ಮೊದಲ ಭಾರತೀಯಳಲ್ಲ

ಅತೀಯಾದ ಮಾದಕ ವಸ್ತು ಸೇವನೆಯೇ ವಯಸ್ಕ ಚಲನಚಿತ್ರ ತಾರೆ ಕೈಲಿ ಸಾವಿಗೆ ಕಾರಣವಾಯಿತೇ

ರಾಮಾಯಣ ಟೀಸರ್ ರಿಲೀಸ್: ರಾವಣನಾಗಿ ಯಶ್ ಲುಕ್ ಇಲ್ಲಿದೆ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments