ರಾಜಕೀಯಕ್ಕೆ ಬರಲು ಒತ್ತಾಯಿಸಿದವರಿಗೆ ಸುಮಲತಾ ಅಂಬರೀಶ್ ಹೇಳಿದ್ದೇನು ಗೊತ್ತಾ?

Webdunia
ಶನಿವಾರ, 2 ಫೆಬ್ರವರಿ 2019 (10:07 IST)
ಬೆಂಗಳೂರು: ಅಂಬರೀಶ್ ನಿಧನದ ನಂತರ ಮಂಡ್ಯ ಕಾಂಗ್ರೆಸ್ ನ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದೆ. ರೆಬಲ್ ಸ್ಟಾರ್ ರಿಂದ ತೆರವಾದ ಸ್ಥಾನಕ್ಕೆ ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ.


ಅಂಬರೀಶ್ ನಂತರ ರಾಜಕೀಯಕ್ಕೆ ಬರುವ ಬಗ್ಗೆ ತಮ್ಮ ಮೇಲೆ ಅಭಿಮಾನಿಗಳು ಒತ್ತಾಯ ಹೇರುತ್ತಿರುವುದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ನಾನು ಏನನ್ನೂ ನಿರ್ಧರಿಸಿಲ್ಲ. ಮಂಡ್ಯದ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಯಾವುದನ್ನೂ ತೀರ್ಮಾನಿಲ್ಲ. ಅಷ್ಟಕ್ಕೂ ಎಲ್ಲವನ್ನೂ ನಾನೊಬ್ಬನೇ ತೀರ್ಮಾನಿಸಲು ಸಾಧ್ಯವಿಲ್ಲ. ಅಂಬರೀಶ್ ಹೋದ ಮೇಲೂ ಇಲ್ಲಿನ ಜನ ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾವು ಏನು ಕೊಟ್ಟರೂ ಕಡಿಮೆಯೇ’ ಎಂದು ಸುಮಲತಾ ಹೇಳಿಕೊಂಡಿದ್ದಾರೆ.

‘ಆದರೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷದ ಹಿರಿಯ ಮುಖಂಡರ ಬಳಿ ಇನ್ನೂ ಚರ್ಚೆ ಮಾಡಿಲ್ಲ. ಅಂಬರೀಶ್ ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ನಾವೂ ಕಾಂಗ್ರೆಸ್ ಎಂದೇ ಇದ್ದೇವೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಏನಾಗುತ್ತದೆ ನೋಡೋಣ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸುವುದಿದ್ದರೂ ಅದು ಮಂಡ್ಯದಿಂದ ಮಾತ್ರ’ ಎಂದು ಸುಮಲತಾ ಸ್ಪಷ್ಟವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲವ್‌ ಜಿಹಾದ್‌ಗೆ ಉತ್ತೇಜನ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೀರ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಹಂಸಲೇಖಾರಿಗೆ ಪದ್ಮ ಪ್ರಶಸ್ತಿ ಇಲ್ಲವೇ ಜ್ಞಾನ ಪೀಠ ಕೊಡಬೇಕು ಎಂದು ನೆನಪಿರಲಿ ಪ್ರೇಮ್ ಅಭಿಯಾನ: ನೆಟ್ಟಿಗರು ಏನಂದ್ರು ಗೊತ್ತಾ

3 ಈಡಿಯಟ್ಸ್ ಸಿನಿಮಾ ಸೋನಮ್ ವಾಂಗ್ಚುಕ್ ಕತೆಯಲ್ಲ, ಆಗ ಅವರು ಯಾರೆಂದೇ ಗೊತ್ತಿರಲಿಲ್ಲ: ಅಮೀರ್ ಖಾನ್

ಮೊದಲ ಆಷಾಢ ಶುಕ್ರವಾರ: ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಿದ ವಿಜಯಲಕ್ಷ್ಮಿ

ಕ್ಯಾನ್ಸರ್‌ ಅನ್ನು ಸಾಮಾನ್ಯ ಜ್ವರದಂತೆ ಎದುರಿಸಿದೆ: ಕ್ಯಾನ್ಸರ್ ಗೆದ್ದು ಬಂದ ಬಗ್ಗೆ ಸಂಜಯ್ ದತ್ ಮಾತು

ಮುಂದಿನ ಸುದ್ದಿ
Show comments