Select Your Language

Notifications

webdunia
webdunia
webdunia
webdunia

ಅಂಬರೀಶ್ ಹೆಸರಲ್ಲಿ ವಿವಾದ ಬೇಡ: ಅಭಿಮಾನಿಗಳಿಗೆ ಸುಮಲತಾ ಮನವಿ

ಅಂಬರೀಶ್ ಹೆಸರಲ್ಲಿ ವಿವಾದ ಬೇಡ: ಅಭಿಮಾನಿಗಳಿಗೆ ಸುಮಲತಾ ಮನವಿ
ಬೆಂಗಳೂರು , ಮಂಗಳವಾರ, 23 ನವೆಂಬರ್ 2021 (11:27 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಹೋರಾಟ ಮಾಡಲು ಹೊರಟಿರುವ ಅವರ ಅಭಿಮಾನಿ ಸಂಘಗಳಿಗೆ ಸುಮಲತಾ ಅಂಬರೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮನೆ ಮಗನಂತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ದುಃಖವನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ. ಅದರ ನಡುವೆ ಅವರ ಹೆಸರು ಹೇಳಿಕೊಂಡು ಅವರ ಸ್ಮಾರಕ ಅಭಿವೃದ್ಧಿಯಾಗಬೇಕು, ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರಕಟವಾಗಬೇಕು ಎಂದೆಲ್ಲಾ ಕೆಲವು ಸಂಘಟನೆಗಳು ಹೋರಾಟ ಮಾಡಲು ತೀರ್ಮಾನ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.

ಎಲ್ಲರೂ ಸಂಕಷ್ಟದಲ್ಲಿರುವಾಗ ಹೋರಾಟ ಮಾಡುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇದರಿಂದ ಅಂಬರೀಶ್ ಘನತೆಗೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯನ್ನೂ ಕೇಳಿ ಪಡೆಯುವುದು ಅತಿಶೋಕ್ತಿಯಾಗಬಾರದು. ಎಲ್ಲಾ ಪ್ರಶಸ್ತಿಗಳನ್ನು ಮೀರಿದ ಪ್ರೀತಿ ನೀವುಗಳು ನಮ್ಮ ಕುಟುಂಬದ ಮೇಲೆ ತೋರಿದ್ದೀರಿ. ಹೀಗಾಗಿ ನಿಮ್ಮೆಲ್ಲಾ ಹೋರಾಟ ಬಿಟ್ಟು ನವಂಬರ್ 24 ರಂದು ಅಂಬರೀಶ್ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ಸುಮಲತಾ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್ ಗೆ ಕೊರೋನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು