Webdunia - Bharat's app for daily news and videos

Install App

ದರ್ಶನ್ ರದ್ದು ತಪ್ಪು ಅಂತ ಯಾಕೆ ಹೇಳ್ತಿದ್ದೀರಿ: ಮಾಧ್ಯಮಗಳ ಮೇಲೆ ಸುಮಲತಾ ಗರಂ

Krishnaveni K
ಮಂಗಳವಾರ, 27 ಆಗಸ್ಟ್ 2024 (14:46 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯದ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮಗಳ ಮೇಲೇ ಹರಿಹಾಯ್ದಿದ್ದಾರೆ.

ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಮಾಧ್ಯಮಗಳು ಕಳೆದ ಎರಡು ದಿನಗಳಿಂದ ನಿರಂತರವಾಗಿ ವರದಿ ಮಾಡುತ್ತಲೇ ಇವೆ. ಈ ಬಗ್ಗೆ ಸುಮಲತಾರನ್ನು ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ಅವರು ಗರಂ ಆಗಿ ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದ್ದಾರೆ. ದರ್ಶನ್ ಇರುವುದಕ್ಕೇ ಹೈಲೈಟ್ ಮಾಡ್ತಿದ್ದೀರಾ ಎಂದಿದ್ದಾರೆ.

‘ನಾನು ಮಾಧ್ಯಮಗಳಿಗೂ ಒಂದು ಪ್ರಶ್ನೆ ಮಾಡಬೇಕಿದೆ. ಜೈಲಿನಲ್ಲಿ ಈ ರೀತಿ ನಡೀತಿದೆ ಎಂದು ಇದೇ ಮೊದಲಾ ಎಂದು ನೀವೇ ಎದೆ ಮುಟ್ಕೊಂಡು ಪ್ರಶ್ನೆ ಮಾಡಿ. ಎಷ್ಟು ವರ್ಷಗಳಿಂದ ಈ ರೀತಿ ನಡೀತಾ ಇದೆ? ಯಾಕೆ ನೀವು ಹೈಲೈಟ್ ಮಾಡ್ತಿದ್ದೀರಿ? ದರ್ಶನ್ ಇರೋದರಿಂದ ನೀವು ಅದನ್ನು ಫೋಕಸ್ ಮಾಡಿ ಅವರೇ ತಪ್ಪು ಅನ್ನೋ ತರ ಬಿಂಬಿತವಾಗುತ್ತಿದೆ. ಇದಕ್ಕೆ ಮೊದಲು ಆಫೀಸರ್ ರೂಪ ಇದರ ಬಗ್ಗೆ ಗಮನ ಸೆಳೆದಾಗ ನೀವು ಯಾಕೆ ಹೈಲೈಟ್ ಮಾಡಿಲ್ಲ? ದರ್ಶನ್ ಇರೋದಕ್ಕೆ ಹೈಲೈಟ್ ಮಾಡ್ತಿದ್ದೀರಾ’ ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.

‘ಜೈಲಿನಲ್ಲಿದ್ದವರು ಕ್ರಿಮಿನಲ್ ಗಳೇ ಆಗಿರ್ತಾರೆ. ಅಲ್ಲಿರುವ ಕಾರಣಕ್ಕೆ ದರ್ಶನ್ ಅವರ ಜೊತೆಯೇ ಇರಬೇಕಾಗುತ್ತದೆ. ಇದರಲ್ಲಿ ಏನು ತಪ್ಪು? ನೀವು ಹೇಳುವ ರೀತಿ ನೋಡಿದರೆ ಅವರು ಅಲ್ಲಿ ಯಾರ ಜೊತೆಗೂ ಮಾತನಾಡಬಾರದು ಎನ್ನೋ ರೀತಿ ಇದೆ’ ಎಂದು ಸುಮಲತಾ ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments