Webdunia - Bharat's app for daily news and videos

Install App

ದೊಡ್ಡ ಮಗ ದರ್ಶನ್ ಜೈಲಲ್ಲಿರಬೇಕಾದರೆ ಅಭಿಷೇಕ್ ಫೋಟೋ ಸ್ಟೇಟಸ್ ಹಾಕಿಕೊಂಡ ಸುಮಲತಾ ಹೇಳಿದ್ದು ಹೀಗೆ

Krishnaveni K
ಗುರುವಾರ, 27 ಜೂನ್ 2024 (15:09 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾದ ಮೇಲೆ ಸುಮಲತಾ ಅಂಬರೀಶ್ ಎಲ್ಲೂ ಹೊರಗೆ ಕಾಣಿಸಿಕೊಂಡೇ ಇಲ್ಲ. ದರ್ಶನ್ ಕುರಿತಾಗಿಯೂ ಎಲ್ಲೂ ಹೇಳಿಕೆ ನೀಡಿಲ್ಲ. ಬಹುಶಃ ಏನನ್ನೂ ಹೇಳುವ ಮನಸ್ಥಿತಿಯಲ್ಲೂ ಇಲ್ಲ ಎನ್ನಬಹುದು.

ದರ್ಶನ್ ರನ್ನು ಸುಮಲತಾ ತಮ್ಮ ದೊಡ್ಡ ಮಗ ಎಂದೇ ಹೇಳುತ್ತಿದ್ದರು. ಸುಮಲತಾ ಎಲ್ಲೇ ಹೋದರೂ, ಏನೇ ನಿರ್ಧಾರ ತೆಗೆದುಕೊಂಡರೂ ದರ್ಶನ್ ಜೊತೆಗೇ ಇರುತ್ತಿದ್ದರು. ಅವರ ರಾಜಕೀಯ ಜೀವನದ ನಿರ್ಧಾರಗಳಲ್ಲೂ ದರ್ಶನ್ ಜೊತೆಗೇ ಸಾಥ್ ಕೊಟ್ಟಿದ್ದರು.

ಆದರೆ ಈಗ ದರ್ಶನ್ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದಾರೆ. ಆದರೆ ದತ್ತು ಮಗನ ಬಗ್ಗೆ ಸುಮಲತಾ ಆಗಲೀ ಪುತ್ರ ಅಭಿಷೇಕ್ ಆಗಲೀ ಒಂದೇ ಒಂದು ಹೇಳಿಕೆ, ಸೋಷಿಯಲ್ ಮೀಡಿಯಾ ಸ್ಟೇಟಸ್ ಹಾಕಿಲ್ಲ.ಇದರ ಬಗ್ಗೆ ಅವರನ್ನು ಕೆಲವರು ಟೀಕೆ ಮಾಡುತ್ತಲೂ ಇದ್ದಾರೆ.

ಈ ನಡುವೆ ಸುಮಲತಾ ಇಂದು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಜೊತೆಗಿರುವ ಅಭಿಷೇಕ್ ಫೋಟೋವೊಂದನ್ನು ಹಂಚಿಕೊಂಡಿದ್ದು ಇದಕ್ಕೆ ಆಲ್ವೇಯ್ಸ್ (ಎಂದೆಂದಿಗೂ) ಎಂದು ಬರಹವನ್ನೂ ಬರೆದಿದ್ದಾರೆ. ಇದನ್ನು ನೋಡುತ್ತಿದ್ದರೆ ದರ್ಶನ್ ಕೃತ್ಯದಿಂದ ಸುಮಲತಾ ಬೇಸರಗೊಂಡು ಇಂತಹದ್ದೊಂದು ಪೋಸ್ಟ್ ಹಾಕಿದರಾ ಎಂಬ ಅನುಮಾನ ಮೂಡುವಂತಿದೆ. ಇನ್ನು ಕೆಲವರು ದರ್ಶನ್ ಬಗ್ಗೆ ಒಂದೇ ಒಂದು ಮಾತನಾಡದೇ ಕೇವಲ ತಮ್ಮ ಸ್ವಂತ ಮಗನ ಬಗ್ಗೆ ಮಾತ್ರ ಸ್ಟೇಟಸ್ ಹಾಕಿಕೊಂಡಿದ್ದಾರೆ ಎಂದು ಟೀಕೆಯನ್ನೂ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments