Webdunia - Bharat's app for daily news and videos

Install App

ಅಂಬಾನಿ ಮದುವೆಯಲ್ಲೂ ಕರಿಮಣಿ ಸರ ಮಾತ್ರ: ಎಷ್ಟು ಸಿಂಪಲ್ ನಮ್ಮ ಸುಧಾಮೂರ್ತಿ ಎಂದ ನೆಟ್ಟಿಗರು

Krishnaveni K
ಬುಧವಾರ, 17 ಜುಲೈ 2024 (12:12 IST)
Photo Credit: Instagram
ಬೆಂಗಳೂರು: ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಇನ್ ಫೋಸಿಸ್ ಸಹ ಸಂಸ್ಥಾಪಕಿ, ಸಂಸದೆ, ಸಾಹಿತಿ ಸುಧಾಮೂರ್ತಿ ಕೂಡಾ ಭಾಗಿಯಾಗಿದ್ದರು. ಆದರೆ ಫೋಟೋ ನೋಡಿ ನೆಟ್ಟಿಗರು ನಮ್ಮ ಸುಧಮ್ಮ ಎಷ್ಟು ಸಿಂಪಲ್ ಅಂತಿದ್ದಾರೆ.

ಸುಧಾಮೂರ್ತಿ ಯಾವತ್ತೂ ಸರಳವಾಗಿಯೇ ಇರಲು ಬಯಸುತ್ತಾರೆ. ಅನಂತ್ ಅಂಬಾನಿ ಮದುವೆಗೆ ಎಲ್ಲರೂ ಸಾಕಷ್ಟು ಸ್ಟೈಲಿಶ್ ಡ್ರೆಸ್ ನಲ್ಲಿ, ದುಬಾರಿ ಆಭರಣಗಳನ್ನು ತೊಟ್ಟುಕೊಂಡು ಬಂದವರೇ ಹೆಚ್ಚು. ಆದರೆ ಸುಧಾಮೂರ್ತಿ ಮಾತ್ರ ಅಲ್ಲಿಯೂ ತಮ್ಮ ಎಂದಿನ ಡ್ರೆಸ್ ಕೋಡ್ ನ್ನೇ ಪಾಲಿಸಿದ್ದಾರೆ.

ಎಂದಿನಂತೇ ಸರಳ ಸೀರೆ, ಕುತ್ತಿಗೆಯಲ್ಲಿ ನೆಕ್ಲೇಸ್, ಹಾರಗಳಿಲ್ಲದೇ ಕೇವಲ ಒಂದು ಕರಿಮಣಿ ಸರ, ಮುಡಿಗೆ ಮಲ್ಲಿಗೆ ಮಾಲೆ ಹಾಕಿಕೊಂಡು ಬಂದಿದ್ದರು. ಅವರ ಜೊತೆಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇವರ ಸರಳತೆಯ ಬಗ್ಗೆ ಕೇಳಿದ್ದೆ. ಆದರೆ ಇಂದು ಪ್ರತ್ಯಕ್ಷವಾಗಿ ನೋಡಿದೆ. ಸುಧಮ್ಮನಿಗೆ ನಮ್ಮ ಕುಟುಂಬದ ಮೇಲಿನ ಅಭಿಮಾನ ನೋಡಿ ಖುಷಿಯಾಯಿತು. ಅವರ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರೂ ಕಾಮೆಂಟ್ ಮಾಡಿದ್ದು ಅಂಬಾನಿಯ ವೈಭವೋಪೇತ, ಸ್ಟಾರ್ ಗಳೇ ತುಂಬಿರುವ ಮದುವೆಯಲ್ಲೂ ಇಷ್ಟು ಸಿಂಪಲ್ ಆಗಿದ್ದಾರಲ್ಲಾ ಎಂದು ಅಚ್ಚರಿಪಟ್ಟುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಕಾಂತಾರ ಚಾಪ್ಟರ್ 1 ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ

ಟಿವಿಕೆ ರಾಲಿಯಲ್ಲಿ ಕಾಲ್ತುಳಿತ: ವಿಜಯ್ ಫ್ಯಾನ್ಸ್ ದೂರುತ್ತಿರುವುದು ಈಗ ಇವರನ್ನೇ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

ಮುಂದಿನ ಸುದ್ದಿ
Show comments