Webdunia - Bharat's app for daily news and videos

Install App

ಕಿಚ್ಚ- ದಚ್ಚು ಅಭಿಮಾನಿಗಳ ಮಧ್ಯೆ ಬಾಸಿಸಮ್ ವಾರ್‌ ಜೋರಾಗುತ್ತಿದ್ದ ಹಾಗೇ ಕ್ಲಾರಿಟಿ ಕೊಟ್ಟ ಸುದೀಪ್ ಫ್ರೆಂಡ್ ಪ್ರದೀಪ್‌

Sampriya
ಗುರುವಾರ, 26 ಡಿಸೆಂಬರ್ 2024 (19:00 IST)
Photo Courtesy X
ಬೆಂಗಳೂರು: ಮಾಕ್ಸ್ ಸಿನಿಮಾಗೆ ಉತ್ತಮ ಪ್ರದರ್ಶನ ಸಿಗುತ್ತಿರುವ ಬೆನ್ನಲ್ಲೇ ನಟ ಪ್ರದೀಪ್ ಅವರು ಕೇಕ್‌ವೊಂದರಲ್ಲಿ ಬರೆದ ಸಾಲು ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮತ್ತೇ ಕಿತ್ತಾಟಕ್ಕೆ ಕಾರಣವಾಗಿದೆ.

ಇದೀಗ ಈ ಸಾಲುಗಳ ಬಗ್ಗೆ ವಿಡಿಯೋ ಮಾಡಿ ನಟ ಪ್ರದೀಪ್ ಅವರು ಕ್ಲಾರಿಟಿ ನೀಡಿದ್ದಾರೆ.  ಸುದೀಪ್ ಮನೆಗೆ ತೆಗೆದುಕೊಂಡ ಹೋದ ಕೇಕ್‌ನಲ್ಲಿ ಬಾಸಿಸಮ್ ಕಾಲ ಮುಗೀತು, ಮಾಕ್ಸಿಮಂ ಕಾಲ ಶುರುವಾಯ್ತು ಎಂದು ಬರೆಯಲಾಗಿತ್ತು. ಈ ಸಾಲು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಸ್ಟಾರ್‌ ವಾರ್‌ಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ಮಧ್ಯೆ ಕಿತ್ತಾಟ ಹೆಚ್ಚುತ್ತಿದ್ದ ಹಾಗೇ ಪ್ರದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  

ಪ್ರದೀಪ್‌ ಹೇಲಿಕೆ ಹೀಗಿದೆ:  ಯಾವ ನಟನಿಗೂ ಹೋಲಿಕೆ ಮಾಡಿ ಬರೆದಿದ್ದಲ್ಲ, ಇದು ಮ್ಯಾಕ್ಸ್ ಚಿತ್ರದಲ್ಲಿಯೇ ಬರುವಂತಹ ಸಾಲು.  ಸಿನಿಮಾದ ಹಾಡಿನಲ್ಲಿ ಮ್ಯಾಕ್ಸ್‌ ಮ್ಯಾಕ್ಸಿಮಂ ಮಾಸ್‌.. ಮಾಸ್‌ನಲ್ಲಿ ಮಾಸ್‌ಗೆ ಬಾಸ್ ಎಂದು ಸಾಲು ಬರೆಯಲಾಗಿತ್ತು.  ಈ ಲೈನ್‌ ಅನ್ನು ಅನುವಾದಿಸಿ ಕೇಕ್ ಮೇಲೆ ಬರೆಯಲಾಯಿತು. ಪ್ರತಿಯೊಬ್ಬ ನಾಯಕ ನಟನಿಗೂ ತನ್ನದೇ ಆದ ಬಳಗವಿರುತ್ತದೆ.  ತನ್ನ ಅಭಿಮಾನಿ ಬಳಗ ತನ್ನ ನಾಯಕ ನಟನನ್ನು ಬಾಸ್ ಅಂತಾರೆ, ಅಣ್ಣ ಅಂತಾರೆ, ಸರ್ ಅಂತಾರೆ, ಅವರಿಗೆ ಇಷ್ಟವಾಗುವಂತೆ ತಮ್ಮ ನಾಯಕ ನಟನನ್ನು ಕರೆಯುತ್ತಾರೆ.

ಇಲ್ಲಿ ಬರೆದ ಒಂದು ಪದ ಯಾವುದೇ ನಟನಿಗೆ ಸೀಮಿತವಾಗಿಲ್ಲ ಅನ್ಸುತ್ತೆ. ಪ್ರತಿಯೊಬ್ಬ ಅಭಿಮಾನಿಗೂ ತನ್ನ ನಾಯಕ ನಟನನ್ನು ಹೇಗೆ ಬೇಕೂ ಕರೆಯುವ ಅಭಿಪ್ರಾಯ ಇದ್ದೇ ಇರುತ್ತದೆ.  ಈ ಸಾಲಿನಲ್ಲಿ ಯಾವ ನಟ ಬಗ್ಗೆಯು ಹೇಳಬೇಕೆಂದು ಬರೆದಿದ್ದಲ್ಲ. ಸಿನಿಮಾ ನೋಡಿ ನನಗೆ ಅನ್ಸಿದ್ದನ್ನ ಬರೆದಿದ್ದೇನೆ. ಸುದೀಪ್ ಅವರನ್ನು ಅಭಿನಯ ಚಕ್ರವರ್ತಿ, ಬಾದ್‌ ಶಾ, ಕಿಚ್ಚ ಬಾಸ್ ಅಂತಾರೆ,  ಕಿಚ್ಚ ಬಾಸ್ ಅಲ್ಲ ಇನ್ಮೇಲಿಂದ್ದ ಕಿಚ್ಚ ಮಾಸ್ ಅಂತಾ ಹೇಳುವುದಕ್ಕೆ ಬಯಸಿದ್ದು. ಇದರಲ್ಲಿ ಯಾವುದೇ ಇನ್ನೊಂದು ಅರ್ಥವನ್ನು ಕಲ್ಪಿಸಿಕೊಡುವ ಅವಶ್ಯಕತೆಯಿಲ್ಲ.

ಇದುವರೆಗೂ ನಾನು ಪರ್ಸನಲ್ ಆಗಿ  ಬರೆದಿಲ್ಲ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments