Webdunia - Bharat's app for daily news and videos

Install App

ತಾಯಂದಿರ ಬಗ್ಗೆ ಸುದೀಪ್‌ಗೆ ವಿಶೇಷ ಗೌರವ, ಇದೇ ವಿಚಾರವಾಗಿ ಚೈತ್ರಾಗೆ ಕ್ಲಾಸ್‌ ತೆಗೆದುಕೊಂಡಿದ್ದ ಕಿಚ್ಚ

Sampriya
ಭಾನುವಾರ, 20 ಅಕ್ಟೋಬರ್ 2024 (11:45 IST)
Photo Courtesy X
ಬೆಂಗಳೂರು: ಹೆಣ್ಣು ಮಕ್ಕಳಿಗೆ ತುಂಬಾನೇ ಗೌರವವನ್ನು ನೀಡುವ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ತುಂಬಾನೇ ಪ್ರೀತಿಸುತ್ತಾರೆ. ತಾನು ಇರುವ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ಅಗೌರವ ಆದರೆ ಹಿಂದೂ ಮುಂದು ನೋಡದೆ ಸುದೀಪ್ ಅವರು ಧ್ವನಿಯೆತ್ತುತ್ತಾರೆ.

ಅಮ್ಮನನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ನಿನ್ನೆ ಬಿಗ್‌ಬಾಸ್‌ ನಡೆದ ಘಟನೆಯೇ ಸಾಕ್ಷಿ. ಜಗದೀಶ್ ಹಾಗೂ ಚೈತ್ರ ಕುಂದಾಪುರ ನಡುವೆ ನಡೆದ ಮಾತಿನ ಚಕಮಕಿಯ‌ಲ್ಲಿ ಅಮ್ಮಂದಿರಿಗೆ ಆದ ಅಗೌರವದ ಬಗ್ಗೆ ಸುದೀಪ್ ಗರಂ ಆಗಿದ್ದಾರೆ. ಅದಲ್ಲದೆ ಈ ವಿಚಾರವಾಗಿ ಚೈತ್ರಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚೈತ್ರ ಅವರು ಜಗದೀಶ್‌ ಹತ್ರ ಜಗಳವಾಡುವ ವೇಳೆ 'ನೀನು ಒಬ್ಬ ಅಪ್ಪಂಗೆ ಹುಟ್ಟಿದ್ರೆ' ಅನ್ನುವ ಮಾತನ್ನು ಪದೇ ಪದೇ ಹೇಳಿದ್ದರು. ಈ ವಿಚಾರವಾಗಿ ಚೈತ್ರರನ್ನು ತರಾಟೆಗೆ ತೆಗೆದುಕೊಂಡ ಸುದೀಪ್ 'ನೀವು ಹೆಣ್ಣು ಮಕ್ಕಳಿಗೆ ಗೌರವ ನೀಡಿ ಎಂದು ಹೋರಾಟ ಮಾಡುತ್ತೀರಿ. ಆದರೆ ಮಾತಿನ ವೇಳೆ ಒಬ್ಬ ಅಪ್ಪಂಗೆ ಹುಟ್ಟಿದ್ರೆ ಎನ್ನುವ ಮೂಲಕ ನೀವು ಅಪ್ಪಂಗೆ ಬೈತಿಲ್ಲ, ಅಮ್ಮನಿಗೆ ಅವಮಾನ ಮಾಡುತ್ತಿದ್ದೀರಿ' ಎಂದು ಗರಂ ಆಗಿದ್ದಾರೆ.

ಸುದೀಪ ಅವರ ತಾಯಿ ಸರೋಜಾ ದೇಸಾಯಿ ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದರು. ಇನ್ನೂಅಮ್ಮನನ್ನು ತುಂಬಾನೇ ಪ್ರೀತಿಸುವ ಸುದೀಪ್ ಅವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತಾಯಿ ಜತೆಗಿನ ಬಾಂಧವ್ಯವನ್ನು ಹೇಳಿಕೊಂಡಿದ್ದರು. ಅದಲ್ಲದೆ ಸರೋಜಾ ಅವರಿಗೂ ತಮ್ಮ ಮಗ ಎಂದರೆ ತುಂಬಾನೇ ಪ್ರೀತಿಯಿಂದ ತಂದುಕೊಟ್ಟ ಸೀರೆಯನ್ನು ತೋರಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments