Webdunia - Bharat's app for daily news and videos

Install App

ಎಸ್ ಪಿ ಬಾಲಸುಬ್ರಮಣ್ಯಂ ಕುಟುಂಬಕ್ಕೆ ದುಬಾರಿ ಆಸ್ಪತ್ರೆ ಬಿಲ್: ಎಸ್ ಪಿ ಚರಣ್ ಹೇಳಿದ್ದೇನು?

Webdunia
ಸೋಮವಾರ, 28 ಸೆಪ್ಟಂಬರ್ 2020 (10:18 IST)
ಚೆನ್ನೈ: ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಆಸ್ಪತ್ರೆ ಬಿಲ್ ಬಗ್ಗೆ ವದಂತಿ ಹಬ್ಬಿದ್ದು, ಈ ಬಗ್ಗೆ ಪುತ್ರ ಎಸ್ ಪಿ ಚರಣ್ ಸ್ಪಷ್ಟನೆ ನೀಡಿದ್ದಾರೆ.


ಎಸ್ ಪಿ ಬಿ ಸುಮಾರು ಒಂದು ತಿಂಗಳು ಕಾಲ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಎಂಜಿಎಂ ಆಸ್ಪತ್ರೆ ಅವರಿಗೆ ದುಬಾರಿ ಮೊತ್ತದ ಬಿಲ್ ನೀಡಿದೆ ಎಂಬ ಸುದ್ದಿ ಹರಡಿತ್ತು. ‘ನಮ್ಮ ತಂದೆ ಒಂದು ತಿಂಗಳ ಕಾಲದ ಆಸ್ಪತ್ರೆ ಬಿಲ್ ಬಗ್ಗೆ ಕೆಲವರು ಬೇಕೆಂದೇ ವದಂತಿ ಹಬ್ಬಿಸುತ್ತಿದ್ದಾರೆ. ಆಸ್ಪತ್ರೆ ಭಾರೀ ಮೊತ್ತ ನೀಡಿದೆ, ನಾನು ಅರ್ಧದಷ್ಟು ಪಾವತಿಸಿದೆ. ಉಳಿದ ಬಿಲ್ ಗೆ ತಮಿಳುನಾಡು ಸರ್ಕಾರದ ಬಳಿ ಮನವಿ ಮಾಡಿದ್ದೇನೆ ಇತ್ಯಾದಿ. ಇಂತಹವರೆಲ್ಲಾ ನಿಜವಾದ ಎಸ್ ಪಿ ಅಭಿಮಾನಿಗಳಲ್ಲ. ನಮ್ಮ ತಂದೆ ಅಲ್ಲಿರುವಷ್ಟು ದಿನವೂ ಎಂಜಿಎಂ ಆಸ್ಪತ್ರೆ ತಮ್ಮ ಸ್ವಂತ ಕುಟುಂಬ ಸದಸ್ಯನಂತೆ ನೋಡಿಕೊಂಡಿದೆ. ಅವರಿಗೆ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಕಾಗದು. ಆಸ್ಪತ್ರೆ ಎಷ್ಟು ಚಾರ್ಜ್ ಮಾಡಿದೆ, ನಾನು ಎಷ್ಟು ನೀಡಿದ್ದೇನೆ ಎಂಬುದು ನಮಗೆ ಗೊತ್ತಿದೆ. ಇದನ್ನು ಸದ್ಯದಲ್ಲೇ ನಾವು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುತ್ತೇವೆ’ ಎಂದು ಎಸ್ ಪಿ ಪಿ ಪುತ್ರ ವದಂತಿಕೋರರಿಗೆ ಚಾಟಿಯೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments