Webdunia - Bharat's app for daily news and videos

Install App

ಮದುವೆ ಬಳಿಕ ಟಿವಿ ಶೋಗೆ ಬಂದ ಸೋನಲ್ ಮೊಂಥೆರೋ ಕುತ್ತಿಗೆ ನೋಡಿ ಹೊಗಳಿಕೆ

Krishnaveni K
ಗುರುವಾರ, 29 ಆಗಸ್ಟ್ 2024 (14:12 IST)
Photo Credit: Instagram
ಬೆಂಗಳೂರು: ತರುಣ್ ಸುಧೀರ್ ಮಡದಿಯಾದ ಬಳಿಕ ನಟಿ ಸೋನಲ್ ಮೊಂಥೆರೋ ಇದೇ ಮೊದಲ ಬಾರಿಗೆ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಕುತ್ತಿಗೆ ನೋಡಿ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಡಿಕೆಡಿ ಶೋಗೆ ಸೋನಲ್ ಅತಿಥಿಯಾಗಿ ಬಂದಿದ್ದಾರೆ. ಈ ಶೋನಲ್ಲಿ ತರುಣ್ ಕೂಡಾ ಅತಿಥಿ ಜಡ್ಜ್ ಆಗಿ ಬಂದಿದ್ದರು. ಈ ವೇಳೆ ಸೋನಲ್ ರನ್ನು ತರುಣ್ ಗೆ ಅಚ್ಚರಿ ನೀಡಲು ಕರೆಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಬಂದ ಸೋನಲ್ ಕುತ್ತಿಗೆಯಲ್ಲಿ ಮದುವೆ ದಿನ ಕಟ್ಟಿರುವ ಅರಶಿನದ ತಾಳಿ ಸರ ಹಾಗೆಯೇ ಇತ್ತು.

ಇದನ್ನು ನೋಡಿ ನೆಟ್ಟಿಗರು ಹೊಗಳಿಕೆಯ ಸುರಿಮಳೆಗೈದಿದ್ದಾರೆ. ವೇದಿಕೆಯಲ್ಲಿ ತರುಣ್ ಗಾಗಿ ಸೋನಲ್ ಒಂದು ಹಾಡನ್ನೂ ಹಾಡಿದ್ದಾರೆ. ಇಬ್ಬರಿಗೂ ನಿರೂಪಕಿ ಅನುಶ್ರೀ ಸಾಕಷ್ಟು ತರ್ಲೆ ಮಾಡಿದ್ದಾರೆ. ಆದರೆ ಎಲ್ಲಕ್ಕಿಂತ ನೆಟ್ಟಿಗರ ಗಮನ ಸೆಳೆದಿದ್ದು ಸೋನಲ್ ತಾಳಿ ಸರ ಹಾಕಿಕೊಂಡಿರುವುದು.

ಇತ್ತೀಚೆಗೆ ಸೆಲೆಬ್ರಿಟಿಗಳು ಮದುವೆಯಾದ ಮೇಲೆ ತಾಳಿ ಸರ ಹಾಕದೇ ಓಡಾಡುತ್ತಾರೆ. ಅದನ್ನೇ ಒಂದು ಪ್ಯಾಶನ್ ಎಂದುಕೊಂಡಿದ್ದಾರೆ. ಆದರೆ ಸೋನಲ್ ಮದುವೆ ದಿನ ಕಟ್ಟಿದ ಅದೇ ಅರಶಿನ ದಾರವನ್ನೇ ಕುತ್ತಿಗೆಯಲ್ಲಿ ಹಾಕಿಕೊಂಡಿರುವುದು ನೋಡಿ ನಿಮಗೆ ತಾಳಿ ಮೇಲೆ ಎಷ್ಟು ಗೌರವವಿದೆ ಎಂದು ಇದರಿಂದ ಗೊತ್ತಾಗುತ್ತದೆ ಎಂದು ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

ಮುಂದಿನ ಸುದ್ದಿ
Show comments