Select Your Language

Notifications

webdunia
webdunia
webdunia
webdunia

ಕಾಣದ ಕೈಗಳು ಕೆಲಸ ಮಾಡುತ್ತಿವೆ: ದರ್ಶನ್ ಆರೋಪ

darshan
bengaluru , ಗುರುವಾರ, 15 ಜುಲೈ 2021 (14:52 IST)

ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಲಾ ಟೆ ಆಗಿದ್ದು ನಿಜ. ಅದು ಮುಗಿದು ಹೋದ ಅಧ್ಯಾಯ. ಒಂದು ತಿಂಗಳ ಹಿಂದೆ ಆಗಿರುವ ಘಟನೆ ಇದು. ನನ್ನ ವಿರುದ್ಧ ಆರೋಪ ಮಾಡುವುದಿದ್ದರೆ ಸಾಬೀತುಪಡಿಸಲಿ. ಪೊಲೀಸರು ತನಿಖೆ ಮಾಡಲಿ ಎಂದರು.

ಊಟ ಕೊಡುವುದು ತಡ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ. ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ನನ್ನ ಮತ್ತು ಸಂದೇಶ್ ನಡುವೆ ಸಾವಿರ ಜಗಳ ಇದೆ ಏನು ಮಾಡೋದು? ಈ ಗಲಾಟೆ ವಿಷಯವನ್ನು ಕೂಡ ಏನು ಮಹಾ ಗಲಾಟೆ ಇದು ಬಿಡು ಗುರು ಎಂದು ಹೇಳಿದ್ದ ಎಂದು ದರ್ಶನ್ ವಿವರಿಸಿದರು.

ಇಂದ್ರಜೀತ್ ಲಂಕೇಶ್ ಮೇಲೆ ನನಗೆ ಯಾವುದೇ ಬೇಸರವಿಲ್ಲ. ಆದರೆ ಘಟನೆಯನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಇಂದ್ರಜೀತ್ ಏನು ದೊಡ್ಡ ಇನ್ವೆಸ್ಟಿಗೇಟರ್ರಾ? ತನಿಖೆ ಮಾಡಲಿ? ಇಂದ್ರಜೀತ್ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ಕೇಳಿದ್ದರು. ಆಗ ಹೋಟೆಲ್ ಗಲಾಟೆ ವಿಷಯ ಕೇಳಿದ್ದರು. ಅವರೇ ಇದೇನು ದೊಡ್ಡ ವಿಷಯ ಅಲ್ಲ ಎಂದು ಹೇಳಿದ್ದರು. ಮೊಬೈಲ್ ನಲ್ಲಿ ಅದು ರೆಕಾರ್ಡ್ ಆಗಿರುತ್ತೆ. ಬೇಕಾದರೆ ಮತ್ತೊಮ್ಮೆ ಕೇಳಿಸಿಕೊಳ್ಳಲಿ ಎಂದು ಅವರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕೆಜಿಎಫ್ 2 ರಿಲೀಸ್ ಡೇಟ್ ಘೋಷಣೆ