Webdunia - Bharat's app for daily news and videos

Install App

ಛೇ… ಮಾಡದ ತಪ್ಪಿಗೆ ಶೃತಿಗೆ ಶಿಕ್ಷೆ.. ಬಿಗ್ ಬಾಸ್ ನೀಡಿದ ಶೀಕ್ಷೆಯೇನು ನೋಡಿ…

Webdunia
ಶನಿವಾರ, 28 ಅಕ್ಟೋಬರ್ 2017 (16:56 IST)
ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ಕ್ಯಾಪ್ಟನ್ ಶೃತಿ.

ಬಿಗ್‌ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದ ವ್ಯಕ್ತಿಯನ್ನು ಸೂಚಿಸಿ, ಕೊರಳಿಗೆ ಬೋರ್ಡ್ ಹಾಕುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಕ್ಯಾಪ್ಟನ್ ಶೃತಿ ಕಳಪೆ ಪ್ರದರ್ಶನ ಬೋರ್ಡ್ ಸ್ಪರ್ಧಿ ದಿವಾಕರ್ ಗೆ ನೀಡಿದರು. ಆದರೆ ಇದರಿಂದ ಕುಪಿತಗೊಂಡ ದಿವಾಕರ್ ಬೋರ್ಡ್ ಹಾಕಿಕೊಳ್ಳಲು ನಿರಾಕರಿಸಿದರು.

ನಾನು ಉತ್ತಮವಾಗಿ ಆಟವಾಡಿದ್ದೇನೆ. ನನಗೆ ಕಳಪೆ ಬೋರ್ಡ್ ಯಾಕೆ? ನಾನು ಅನಕ್ಷರಸ್ಥ, ನೀವೆಲ್ಲಾ ಎಜುಕೇಟೆಡ್ಸ್. ಹೀಗಿರುವಾಗ ನಿಮಗೆ ತಿಳಿಯೋದಿಲ್ವಾ ಎಂದು ಶೃತಿಯನ್ನು ದಿವಾಕರ್ ತರಾಟೆಗೆ ತೆಗೆದುಕೊಂಡ್ರು.

ಹೀಗೆ ಶುರುವಾದ ಫಲಕದ ಗೊಂದಲ ರಾತ್ರಿಯಾದರೂ ಮುಗಿಯಲಿಲ್ಲ. ಕ್ಯಾಪ್ಟನ್‌ ನಿರ್ಧಾರ ಸರಿಯಾಗಿದೆ ಎಂದು ಕೆಲವರು ಸಮರ್ಥಿಸಿಕೊಂಡ್ರೆ, ಇನ್ನು ಕೆಲವರು ದಿವಾಕರ್ ಪರ ವಹಿಸಿದ್ರು. ಎಷ್ಟೇ ಒತ್ತಾಯ ಮಾಡಿದ್ರು ದಿವಾಕರ್‌ ಕಳಪೆ ಬೋರ್ಡ್ ಹಾಕಿಕೊಳ್ಳಲು ಸಮ್ಮತಿಸಲಿಲ್ಲ.

ಕಡೆಗೆ ಈ ಗೊಂದಲ ನಿವಾರಿಸಲು ಬಿಗ್‌ಬಾಸ್‌ ಎಂಟ್ರಿ ನೀಡಬೇಕಾಯಿತು. ಬೋರ್ಡ್ ಹಾಕಿಸಲು ವಿಫಲವಾದ ಕ್ಯಾಪ್ಟನ್‌ ಹಾಗೂ ಮೊಂಡುತನ ಪ್ರದರ್ಶಿಸಿದ ದಿವಾಕರ್‌ ನ್ನು ಬಿಗ್ ಬಾಸ್ ತಪ್ಪಿಸ್ಥರು ಎಂದರು. ಈ ವಾರ ಮನೆಯಿಂದ ಹೊರ ಹೋಗಲು ಇಬ್ಬರನ್ನೂ ನೇರವಾಗಿ ನಾಮಿನೇಟ್‌ ಮಾಡುವ ಮೂಲಕ ಬಿಗ್ ಬಾಸ್ ಶಿಕ್ಷೆ ನೀಡಿದ್ರು.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments