Select Your Language

Notifications

webdunia
webdunia
webdunia
webdunia

ಕೊನೆಗೂ ತವರಿಗೆ ಮರಳಿದ ಶಿವರಾಜ್ ಕುಮಾರ್

ಕೊನೆಗೂ ತವರಿಗೆ ಮರಳಿದ ಶಿವರಾಜ್ ಕುಮಾರ್
ಬೆಂಗಳೂರು , ಬುಧವಾರ, 24 ಜುಲೈ 2019 (09:12 IST)
ಬೆಂಗಳೂರು: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ಬೆಂಗಳೂರಿಗೆ ಮರಳಿದ್ದಾರೆ.


ಭುಜದ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ನಿನ್ನೆ ಸಂಜೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಳೆದ 10 ದಿನಗಳಿಂದ ಶಿವಣ್ಣ ಲಂಡನ್ ನಲ್ಲಿದ್ದರು.

ಹೀಗಾಗಿ ಈ ಬಾರಿ ಅವರ ಬರ್ತ್ ಡೇಯನ್ನೂ ಅಭಿಮಾನಿಗಳ ಜತೆ ಆಚರಿಸಿಕೊಂಡಿರಲಿಲ್ಲ. ಇದು  ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ತವರಿಗೆ ಬಂದ ಬಳಿಕ ಅಭಿಮಾನಿಗಳ ಜತೆ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಇನ್ನು, ಶಸ್ತ್ರಚಿಕಿತ್ಸೆ ಮುಗಿದ ಹಿನ್ನಲೆಯಲ್ಲಿ ಕೆಲವು ದಿನಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿರುವ ಶಿವಣ್ಣ ಬಳಿಕವಷ್ಟೇ ತಾವು ಒಪ್ಪಿಕೊಂಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಒತ್ತಡಕ್ಕೆ ಮಣಿದು ಕುರುಕ್ಷೇತ್ರದ ಮತ್ತೊಂದು ಟ್ರೈಲರ್ ರಿಲೀಸ್