Webdunia - Bharat's app for daily news and videos

Install App

ಸಿಎಂ ಮೂರು ಬಾರಿ ಕಾಲ್ ಮಾಡಿದ್ರು: ಜೇಮ್ಸ್ ವಿವಾದ ಬಗೆಹರಿಸಿದ ಶಿವಣ್ಣ ಮಾತು

Webdunia
ಗುರುವಾರ, 24 ಮಾರ್ಚ್ 2022 (17:01 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ನ್ನು ಪರಭಾಷೆ ಸಿನಿಮಾಗಳಿಗಾಗಿ ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ ಎಂಬ ವಿವಾದದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಇಂದು ಶಿವರಾಜ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು.

ಬೆಳಿಗ್ಗೆ ಸಿಎಂ ಬೊಮ್ಮಾಯಿವರನ್ನು ಭೇಟಿಯಾಗಿದ್ದ ಶಿವರಾಜ್ ಕುಮಾರ್, ನಿರ್ಮಾಪಕ ಕಿಶೋರ್, ಬಳಿಕ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಜೈರಾಜ್ ಮತ್ತು ಇತರರೊಂದಿಗೆ ಸಭೆ ನಡೆಸಿ ವಿವಾದ ಬಗೆಹರಿಸಿತು.

ಬಳಿಕ ಮಾತನಾಡಿದ ಶಿವಣ‍್ಣ '‘ಸಿಎಂ ಬೊಮ್ಮಾಯಿವರು ಈ ಸಮಸ್ಯೆಗೆ ಸ್ಪಂದಿಸಿದ್ದಾರೆ. ಸುಮ್ಮನೇ ತಪ್ಪು ಹುಡುಕಬಾರದು. ಇದು ನಿರ್ಮಾಪಕರು ಮತ್ತು ವಿತರಕರ ನಡುವೆ ನಡೆಯುತ್ತಿದೆ. ಅಪ್ಪು ಕೊನೆ ಸಿನಿಮಾ ಎಂಬ ಕಾರಣಕ್ಕೆ ಜನರಲ್ಲಿ ಎಮೋಷನ್ ಇದೆ. ಸಿಎಂ ಕೂಡಾ ಸಮಸ್ಯೆ ಏನೆಂದು ಖುದ್ದಾಗಿ ನನಗೆ ನಿನ್ನೆ ಮೂರು ಮೂರು ಬಾರಿ ಕರೆ ಮಾಡಿ ವಿಚಾರಿಸಿದ್ದಾರೆ. ಈವತ್ತೂ ಅವರನ್ನು ಭೇಟಿಯಾದಾಗ ಏನೇ ಸಮಸ್ಯೆಯಿದ್ದರೂ ನಮ್ಮ ಸಹಕಾರವಿರುತ್ತದೆ ಎಂದಿದ್ದರು. ಅವರು ಮೊದಲಿನಿಂದಲೂ ನಮ್ಮ ಕುಟುಂಬ ಮಾತ್ರವಲ್ಲ, ಇಡೀ ಚಿತ್ರರಂಗದ ಪರವಾಗಿಯೇ ಇದ್ದಾರೆ. ಚಿತ್ರರಂಗ ಫ್ಯಾಮಿಲಿಯಿದ್ದಂತೆ. ಯಾರಿಗೇ ಸಮಸ್ಯೆಯಾದರೂ ನಾನು ಇಲ್ಲಿ ಬಂದು ಮಾತಾಡಲೇಬೇಕಾಗುತ್ತದೆ’ ಎಂದು ಶಿವರಾಜ್ ಕುಮಾರ್ ಹೇಳಿದರು.

ಇದಕ್ಕೂ ಮೊದಲು ನಿರ್ಮಾಪಕ ಕಿಶೋರ್ ಮಾತನಾಡಿ ‘ಯಾರೂ ಸಿನಿಮಾ ತೆಗೆಯಲು ಒತ್ತಡ ಹೇರಿಲ್ಲ. ಆದರೆ ಒಂದು ನೈಟ್ ಶೋ ಕೊಡ್ತೀರಾ ಅಂತ ಕೇಳಿದ್ರು. ನೀವೇ ಆನ್ ಲೈನ್ ನಲ್ಲಿ ನೋಡಿದ್ರೆ ಗೊತ್ತಾಗುತ್ತದೆ. ಎಲ್ಲೂ ಸಿನಿಮಾ ತೆಗೆದಿಲ್ಲ.  386 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಎರಡನೇ ವಾರ 275 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

ಮುಂದಿನ ಸುದ್ದಿ
Show comments