Select Your Language

Notifications

webdunia
webdunia
webdunia
webdunia

ಧರ್ಮಸ್ಥಳದಲ್ಲಿ ಡಾ. ರಾಜ್ ಗೆ ಹೀಗೊಂದು ಆಸೆಯಿತ್ತಂತೆ!

ಧರ್ಮಸ್ಥಳದಲ್ಲಿ ಡಾ. ರಾಜ್ ಗೆ ಹೀಗೊಂದು ಆಸೆಯಿತ್ತಂತೆ!
ಬೆಂಗಳೂರು , ಶುಕ್ರವಾರ, 3 ಮೇ 2019 (06:13 IST)
ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ವಿವಾಹ ಕಾರ್ಯಕ್ರಮ ಎಂದರೆ ಡಾ. ರಾಜ್ ಕುಮಾರ್ ನೆನಪಾಗುತ್ತದೆ. ಅವರು ಅಂದು ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದ್ದು ಇಂದಿಗೂ ನೆನಪಾಗಿ ಉಳಿದಿದೆ.


ಈ ಬಾರಿ ಡಾ. ರಾಜ್ ಹಿರಿಯ ಪುತ್ರ, ನಟ ಶಿವರಾಜ್ ಕುಮಾರ್ ದಂಪತಿ ಸಮೇತರಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವಜೋಡಿಗಳಿಗೆ ಶುಭ ಹಾರೈಸಿದರು.

ಡಾ. ರಾಜ್ ಬಿಟ್ಟರೆ, ಸಿನಿ ತಾರೆಯರ ಪೈಕಿ ಕಳೆದ ಬಾರಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಜೋಡಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಅದಾದ ಬಳಿಕ ಶಿವಣ್ಣ ಈ ಕಾರ್ಯಕ್ರಮಕ್ಕೆ ಮೂರನೇ ಸಿನಿ ತಾರಾ ಜೋಡಿ ಎನಿಸಿಕೊಂಡರು.

ಈ ಸಂದರ್ಭದಲ್ಲಿ ಅಪ್ಪಾಜಿಯನ್ನು ನೆನೆಸಿಕೊಂಡ ಶಿವಣ್ಣ, ಅಪ್ಪಾಜಿಗೆ ಈ ಕಾರ್ಯಕ್ರಮದ ಸ್ವರ್ಣ ಮಹೋತ್ಸವ ಆಗಬೇಕು, ಅದರಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸಿತ್ತು. ಆದರೆ ಅದು ನನಸಾಗಲಿಲ್ಲ. ಆದರೆ ನನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು. ಹೀಗಾಗಿ ಮಾತನಾಡುವಾಗ ಶಿವಣ್ಣ ಕೊಂಚ ಭಾವುಕರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟಕ್ಕರ್ ಟೀಸರ್ ಮೆಚ್ಚಿದ ದರ್ಶನ್