Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಶಿವರಾಜ್ ಕುಮಾರ್ ಹೇಳಿದ್ದು ಒಂದೇ ಮಾತು!

ಸರ್ಕಾರಕ್ಕೆ ಶಿವರಾಜ್ ಕುಮಾರ್ ಹೇಳಿದ್ದು ಒಂದೇ ಮಾತು!
ಬೆಂಗಳೂರು , ಗುರುವಾರ, 4 ಫೆಬ್ರವರಿ 2021 (09:13 IST)
ಬೆಂಗಳೂರು: ಥಿಯೇಟರ್ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ಸಚಿವರ ಜೊತೆ ಸಭೆ ನಡೆಸಿದ ಬಳಿಕ ನಟ ಶಿವರಾಜ್ ಕುಮಾರ್ ಮಾಧ‍್ಯಮಗಳೊಂದಿಗೆ ಮಾತನಾಡಿದ್ದಾರೆ.


ಥಿಯೇಟರ್ ನಲ್ಲಿ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವುದರಿಂದ ನೂರಾರು ಕೋಟಿ ಬಂಡವಾಳ ಹೂಡಿ ಚಿತ್ರ ಮಾಡುತ್ತಿರುವ ನಿರ್ಮಾಪಕರು, ವಿತರಕರು, ಥಿಯೇಟರ್ ಮಾಲಿಕರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಶಿವಣ್ಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಭೆ ಬಳಿಕ ಮಾತನಾಡಿದ ಶಿವಣ್ಣ ಹೇಳಿದ್ದು ಒಂದೇ ಮಾತು. ‘ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ಹೌಸ್ ಫುಲ್ ಪ್ರದರ್ಶನ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ನಾನು ಹೇಳೋದು ಒಂದೇ ಮಾತು, ಥ್ಯಾಂಕ್ಸ್. ಹೌಸ್ ಫುಲ್ ಪ್ರದರ್ಶನ ಬೇಡ ಎನ್ನುವುದಕ್ಕೆ ಸರ್ಕಾರದ ಬಳಿಯೂ ಕಾರಣಗಳಿತ್ತು, ಬೇಕು ಎನ್ನುವುದಕ್ಕೆ ನಮ್ಮ ಬಳಿಯೂ ಕಾರಣಗಳಿತ್ತು. ಅದನ್ನು ನಾವು ಪರಸ್ಪರ ಹಂಚಿಕೊಂಡಿದ್ದೇವೆ. ಇದಕ್ಕೆ ನಮಗೆ ಸ್ಪಂದನೆ ಸಿಕ್ಕಿದೆ’ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿದ ಸರ್ಕಾರ: ಇಂದು ಅಧಿಕೃತ ಆದೇಶ