Select Your Language

Notifications

webdunia
webdunia
webdunia
webdunia

ದರ್ಶನ್‌ನನ್ನು ಶಿಷ್ಯವೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ: ಅಡ್ಡಂಡ ಕಾರ್ಯಪ್ಪ

Addanda Kariappa

Sampriya

ಮೈಸೂರು , ಶನಿವಾರ, 15 ಜೂನ್ 2024 (14:28 IST)
Photo Courtesy X
ಮೈಸೂರು: ನಟ ದರ್ಶನ್‌ಗೆ ಒಳ್ಳೆಯ ಹೆಂಡತಿ, ಸುಂದರವಾದ ಮಗ ಇದ್ದಾರೆ. ಆ ನಟನ ಬಾಳಿನಲ್ಲಿ ಪವಿತ್ರಾಗೌಡ ಶನಿಯಂತೆ ಬಂದಳು. ಈಗ ದರ್ಶನ್ ಬದುಕು ಕೈ ಚೆಲ್ಲಿದ್ದಾನೆ. ಕಲೆಯಲ್ಲಿ ಉತ್ತುಂಗಕ್ಕೆ ಏರಿದ್ದ, ಆತನನ್ನು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್‌ಗೆ ನಟನೆ ಕಲಿಸಿ ಕೊಟ್ಟ ಗುರು ಅಡ್ಡಂಡ ಕಾರ್ಯಪ್ಪ. 1987ರಲ್ಲಿ ನೀನಾಸಂ ನಲ್ಲಿ ದರ್ಶನ್‌ಗೆ ಕಲೆಯನ್ನು ಕಾರ್ಯಪ್ಪ ಹೇಳಿಕೊಟ್ಟ ಮೊದಲ ಗುರುವಾಗಿದ್ದರು. ಕೊಲೆ ಪ್ರಕರಣದಲ್ಲಿ ದರ್ಶನ್‌ ಸಿಲುಕಿಕೊಂಡಿರುವ ಬಗ್ಗೆ ಅವರು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಆಗ 7ನೇ ತರಗತಿಯಲ್ಲಿದ್ದ. 7ನೇ ತರಗತಿಗೆ 10ನೇ ತರಗತಿಯವರ ರೀತಿ ಕಾಣುತ್ತಿದ್ದ. ನಮ್ಮ ನಾಟಕದಲ್ಲಿ ದರ್ಶನ್‌ಗೆ ರಾಜನ ಪಾತ್ರ ಕೊಟ್ಟಿದ್ದೆ. ತುಂಬಾ ಚೆನ್ನಾಗಿ
ಅಭಿನಯಿಸಿದ್ದ. ನನ್ನ ಹೆಂಡತಿಯೇ ದರ್ಶನ್‌ಗೆ ಬಣ್ಣ ಹಚ್ಚಿದ್ದಳು. ಇದಾದ ಬಳಿಕ ಇವರ ಮೊದಲ ಸಿನಿಮಾ ನನಗೆ ಇಷ್ಟವಾಗಲಿಲ್ಲ. ಮತ್ತೊಮ್ಮೆ ಭೇಟಿಯಾದ ಸಂದರ್ಭ ನೀನಾಸಂಗೆ ಹೋಗುವಂತೆ ಪತ್ರ ಕೊಟ್ಟೆ. ಕಲಾವಿದನಾಗಿರುವ ನಾನು ಬೇರೊಬ್ಬ ಕಲಾವಿದನನ್ನು ಬೆಳೆಸುವುದು ನನ್ನ ಜವಾಬ್ದಾರಿ. ಮಂಡ್ಯ ರಮೇಶ್ ಕೂಡ ಒಂದು ಪತ್ರ ಕೊಟ್ಟರು. ಇದಾದ ಬಳಿಕ ದರ್ಶನ್ ಹೆಗ್ಗೋಡುನಲ್ಲಿರುವ ನೀನಾಸಂನಲ್ಲಿ ತರಬೇತಿ ಪಡೆದುಕೊಂಡ ಎಂದು ಹೇಳಿದರು.

ದರ್ಶನ್‌ಗೆ ಸಂಸ್ಕಾರ ಇಲ್ಲದ ಕಾರಣ ಆತನಿಗೆ ಈ ಪರಿಸ್ಥಿತಿ ಬಂದಿದೆ. ಪವಿತ್ರಾ ಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಯಶಸ್ಸು ಎಂಬುದು ದರ್ಶನ್ ಒಳಗೆ ಅಹಂ ಬೆಳೆಸಿತು. ಸಿನಿಮಾದಲ್ಲಿ ಮಾಡುವ ಪಾತ್ರವನ್ನು ನಿಜ ಜೀವನದಲ್ಲಿ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಪ್ರಕರಣದಲ್ಲಿ ಸಿಲುಕಿಕೊಳ್ಳದ ನಾಲ್ವರು ಅತ್ಯಂತ ಅದೃಷ್ಟಶಾಲಿಗಳು ಎಂದರೆ ಇವರೇ ಅಂತೆ