Select Your Language

Notifications

webdunia
webdunia
webdunia
webdunia

ಮಧುರ ಪ್ರೇಮಕಥೆ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

ಮಧುರ ಪ್ರೇಮಕಥೆ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!
ಬೆಂಗಳೂರು , ಗುರುವಾರ, 19 ಡಿಸೆಂಬರ್ 2019 (17:42 IST)
ನಿರ್ದೇಶಕ ಸಿಂಪಲ್ ಸುನಿ ಗರಡಿಯಲ್ಲಿ ಪಳಗಿಕೊಂಡವರೇ ನಿರ್ದೇಶಕರಾಗಿ, ನಟ ನಟಿಯರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಸಾಲಿಗೆ ಅನೂಪ್ ರಾಮಸ್ವಾಮಿ ನಿರ್ದೇಶಕರಾಗಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಎಷಿ ಮತ್ತು ಧನ್ಯಾ ರಾಮಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ವ್ಯಾಪಕ ನಿರೀಕ್ಷೆಗಳಿಗೂ ಕಾರಣವಾಗಿದೆ. ಆರಂಭದಿಂದಲೂ ಶೀರ್ಷಿಕೆಗೆ ತಕ್ಕುದಾದ ವಿಶಿಷ್ಟ ಶೈಲಿಯಲ್ಲಿ ಸದ್ದು ಮಾಡುತ್ತಾ ಬಂದಿದ್ದ ಈ ಸಿನಿಮಾ ಈ ವಾರ ನಿಮ್ಮೆಲ್ಲರೆದುರು ಅನಾವರಣಗೊಳ್ಳುತ್ತಿದೆ.
webdunia
ಸಿಫಲ್ ಸುನಿ ಮತ್ತಯು ಪರಭಾಷೆಗಳ ಒಂದಷ್ಟು ನಿರ್ದೇಶಕರ ಜೊತೆ ಕಾರ್ಯ ನಿರ್ವಹಿಸಿ ಪಳಗಿಕೊಂಡಿರುವವರು ಅನೂಪ್ ರಾಮಸ್ವಾಮಿ. ಅವರು ತೀರಾ ಭಿನ್ನವಾದ ಕಥಾ ಹಂದರದೊಂದಿಗೇ ಈ ಸಿನಿಮಾವನ್ನು ರೂಪಿಸಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ ಈ ಸಿನಿಮಾ ಅದೆಷ್ಟು ಸೊಗಸಾಮಿ ಮೂಡಿ ಬಂದಿದೆ ಎಂಬುದು ಈಗಾಗಲೇ ಟ್ರೇಲರ್ ಮೂಲಕ ಸ್ಪಷ್ಟಗೊಂಡಿದೆ. ಹಾಗಾದರೆ ಈ ಸಿನಿಮಾ ಕಥೆಯೇನು ಎಂಬ ಪ್ರಶ್ನೆ ಪ್ರೇಕ್ಷಕರನ್ನೆಲ್ಲ ಕಾಡುತ್ತಲೇ ಇದೆ. ಆದರೆ ಇದೊಂದು ವಿಚಾರವನ್ನು ಮಾತ್ರ ಚಿತ್ರ ತಂಡ ಬಲು ಜತನದಿಂದ ಕಾಪಾಡಿಕೊಂಡು ಬಂದಿದೆ.
webdunia
ಆದರೆ ಈ ಬಗ್ಗೆ ಕೆಲ ಇಂಟರೆಸ್ಟಿಂಗ್ ವಿಚಾರಗಳು ಮಾತ್ರ ಹಂತ ಹಂತವಾಗಿ ಹೊರ ಬೀಳುತ್ತಿವೆ. ಇಲ್ಲಿ ಬಹುಭಾಗ ಕಾಮಿಡಿಗೇ ಹೆಚ್ಚು ಮಹತ್ವ ಕೊಡಲಾಗಿದೆಯಂತೆ. ಆದರೆ ಇದೆಲ್ಲದರಾಚೆಗೂ ಮಧುರವಾದ ಪ್ರೇಮ ಕಥಾನಕವೊಂದಿದೆ. ಈ ಚಿತ್ರದಲ್ಲಿ ಎಂಬಿಬಿಎಸ್ ಕಲಿಯುತ್ತಿರೋ ವಿದ್ಯಾರ್ಥಿನಿಯ ಪಾತ್ರದಲ್ಲಿ ಧನ್ಯಾ ಬಾಲಕೃಷ್ಣ ನಟಿಸಿದ್ದಾರೆ. ನಾಯಕಿಯನ್ನು ತುಂಬಾನೇ ಪ್ರೀತಿಸುವ ನಾಯಕ ಆಕೆಗಾಗಿ ಏನನ್ನು ಬೇಕಾದರೂ ಮಾಡಲು ಸದಾ ಸಿದ್ಧವಾಗಿರುತ್ತಾನೆ.  ಇಂಥಾ ನಾಯಕನೇ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡು ಅದರಿಂದ ಹೇಗೆ ಪಾರಾಗುತ್ತಾಮೆಂಬುದು ಈ ಚಿತ್ರದ ಪ್ರಧಾನ ಅಂಶ. ಅದೆಲ್ಲವೂ ಈವಾರ ಬಯಲಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ದೇವರಿಗೆ ಅವಮಾನ: ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕಿದ ದಬಾಂಗ್ 3 ಸಿನಿಮಾ ತಂಡ