Webdunia - Bharat's app for daily news and videos

Install App

ರೈತ ಹೋರಾಟಕ್ಕೆ ಚಿತ್ರಸಾಹಿತಿ ಕವಿರಾಜ್ ಬೆಂಬಲ

Webdunia
ಮಂಗಳವಾರ, 8 ಡಿಸೆಂಬರ್ 2020 (09:44 IST)
ಬೆಂಗಳೂರು: ಕೇಂದ್ರ ಸರ್ಕಾರ ರೈತ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಇಂದಿನ ಭಾರತ್ ಬಂದ್ ಗೆ ಚಿತ್ರಸಾಹಿತಿ ಕವಿರಾಜ್ ಬೆಂಬಲ ಸೂಚಿಸಿದ್ದಾರೆ.

 

ಸ್ಯಾಂಡಲ್ ವುಡ್ ನಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಕವಿರಾಜ್ ತಮ್ಮ ಫೇಸ್ ಬುಕ್ ಪುಟದಲ್ಲಿ ರೈತರ ಹೋರಾಟ ಬೆಂಬಲಿಸಿ ಸುದೀರ್ಘ ಸಂದೇಶ ಬರೆದಿದ್ದಾರೆ. ಈ ಖಾಯಿದೆಯ ಬಿಸಿ ನಮಗೆ ಈಗ ಗೊತ್ತಾಗಲ್ಲ. ನಮ್ಮ ಬುಡಕ್ಕೆ ಬರುವವರೆಗೂ ಇದು ಗೊತ್ತಾಗಲ್ಲ. ಇದು ಅಸಲಿಗೆ ಕೇವಲ ರೈತರ ಹೋರಾಟವಲ್ಲದೆ, ನಮ್ಮ ನಿಮ್ಮೆಲ್ಲರ ಹೋರಾಟವಾಗಬೇಕಿತ್ತು. ತಳ್ಳು ಗಾಡಿಯಲ್ಲಿ ಚೌಕಾಸಿ ಮಾಡಿ ತರಕಾರಿ ಕೊಳ್ಳೋರು ನಾವು. ಮುಂದೊಂದು ಅದಕ್ಕೂ ದುಬಾರಿ ಬೆಲೆ ತೆತ್ತು ಕೊಳ್ಳುವ ಪರಿಸ್ಥಿತಿ ಬರಬಹುದು. ಕಡಿಮೆ ಬೆಲೆಯಲ್ಲಿ ನಿಮ್ಮ ಆಯ್ಕೆಯ ಕೇಬಲ್ ಚಾನೆಲ್ ವೀಕ್ಷಿಸಿ ಎಂದು ಈ ಮೊದಲು 150 ರೂ.ಗೆ 300 ಟಿವಿ ಚಾನೆಲ್ ನೋಡುತ್ತಿದ್ದ ನಮ್ಮನ್ನು ಈಗ 300 ರೂ. ತೆತ್ತು ಕೆಲವೇ ಚಾನೆಲ್ ವೀಕ್ಷಿಸುವಂತೆ ಮಾಡಿದ ಕಾನೂನಿನಂತೆಯೇ ಇದೂ ಆಗಲಿದೆ. ಈಗ ನಮಗೆ ಇದರ ಬಿಸಿ ಗೊತ್ತಾಗುತ್ತಿಲ್ಲ. ಇದು ಜನ ಸಾಮಾನ್ಯರ ಹೋರಾಟವಾಗಬೇಕು ಎಂದು ಕವಿರಾಜ್ ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments