Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾ ನೋಡಿ ಎನ್ನುವ ಸ್ಟಾರ್ ಗಳೇ ಹೀಗೆ ಮಾಡೋದು ಸರೀನಾ?

ಕನ್ನಡ ಸಿನಿಮಾ ನೋಡಿ ಎನ್ನುವ ಸ್ಟಾರ್ ಗಳೇ ಹೀಗೆ ಮಾಡೋದು ಸರೀನಾ?
ಬೆಂಗಳೂರು , ಭಾನುವಾರ, 2 ಜನವರಿ 2022 (09:15 IST)
ಬೆಂಗಳೂರು: ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿರುವುದರಿಂದ ಕನ್ನಡ ಸಿನಿಮಾಗಳಿಗೆ ಹೊಡೆತ ಬೀಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕಾಗಿ ಇತ್ತೀಚೆಗೆ ಧ್ರುವ ಸರ್ಜಾ, ರಚಿತಾ ರಾಂ ಸೇರಿದಂತೆ ಸ್ಟಾರ್ ಗಳು ಕನ್ನಡ ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದ್ದರು.

ಆದರೆ ನಾಳೆ ತೆಲುಗು ಮೂಲದ ಆರ್ ಆರ್ ಆರ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಕಲಾವಿದರಾದ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಮುಂತಾದ ನಟರನ್ನು ಆಹ್ವಾನಿಸಲಾಗಿತ್ತು.

ಒಂದು ವೇಳೆ ಈ ನಟರು ಭಾಗಿಯಾಗಿದ್ದರೆ ಕನ್ನಡ ಸಿನಿಮಾಗಳನ್ನೇ ಮೊದಲು ನೋಡಿ ಎನ್ನುವ ಸ್ಟಾರ್ ಗಳು ಪರಭಾಷೆ ಚಿತ್ರದ ಪ್ರಿರಿಲೀಸ್ ಈವೆಂಟ್ ಗೆ ಹೋಗಿ ಆ ಸಿನಿಮಾಗೆ ಪ್ರಚಾರ ಕೊಡುತ್ತಿದ್ದಾರೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಸದ್ಯಕ್ಕೆ ಸಿನಿಮಾ ರಿಲೀಸ್ ಮುಂದೂಡಿಕೆಯಾಗಿರುವುದರಿಂದ ಆ ಅವಾಂತರ ತಪ್ಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಆರ್ ಆರ್ ಆರ್ ರಿಲೀಸ್