Publish Date: Tue, 15 Jun 2021 (09:29 IST)
Updated Date: Tue, 15 Jun 2021 (09:31 IST)
ಬೆಂಗಳೂರು: ರಸ್ತೆ ಅಪಘಾತದಿಂದಾಗಿ ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ್ದ ನಟ ಸಂಚಾರಿ ವಿಜಯ್ ಏಳು ಜನರಿಗೆ ಜೀವ ನೀಡಿ ಪ್ರಾಣ ಬಿಟ್ಟಿದ್ದಾರೆ.
ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ್ದಾರೆಂದು ತಿಳಿದ ತಕ್ಷಣ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ನಿನ್ನೆ ರಾತ್ರಿ ಎರಡೆರಡು ಬಾರಿ ಮೆದುಳಿನ ಪರೀಕ್ಷೆ ನಡೆಸಿದ ವೈದ್ಯರು ಬಳಿಕ ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಿದರು.
ಅದರಂತೆ ಅವರ ಎರಡು ಕಣ್ಣುಗಳು, 1 ಲಿವರ್, ಹೃದಯದ ಕವಾಟಗಳು, ಶ್ವಾಸಕೋಶ ಮತ್ತು ಎರಡು ಕಿಡ್ನಿಗಳನ್ನು ಪಡೆಯಲಾಯಿತು. ತಕ್ಷಣವೇ ಇದನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿರುವ ಅಗತ್ಯವಿದ್ದ ರೋಗಿಗಳಿಗೆ ಕಸಿ ಮಾಡಲಾಯಿತು. ಬಳಿಕ ಬೆಳಗಿನ ಜಾವ ಅಧಿಕೃತವಾಗಿ ವೈದ್ಯರು ನಿಧನದ ವಾರ್ತೆಯನ್ನು ಘೋಷಿಸಿದರು.