Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು

ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು
ಬೆಂಗಳೂರು , ಸೋಮವಾರ, 20 ನವೆಂಬರ್ 2017 (09:03 IST)
ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ಸವಾಲೆಸೆದಿದ್ದಾರೆ.
 

ಅನಿರುದ್ಧ್ ಅಭಿನಯದ ರಾಜನರಸಿಂಹ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ರಿಕ್ರಿಯೇಟ್ ಮಾಡಿ ತೋರಿಸಲಾಗಿದೆ. ಈ ಚಿತ್ರದ ಅಡಿಯೋ ಬಿಡುಗಡೆಗೆ ಬಂದಿದ್ದ ಯಶ್, ವಿಷ್ಣುವರ್ಧನ್ ರನ್ನು ಸ್ಮರಿಸಿಕೊಂಡರು.

ಯಾವತ್ತಿದ್ದರೂ ಕರ್ನಾಟಕಕ್ಕೆ ಒಬ್ಬರೇ ‘ರಾಮಚಾರಿ’. ಅವರು ವಿಷ್ಣು ದಾದ. ನಾನು ರಾಮಚಾರಿ ಹೆಸರಿನಲ್ಲಿ ಸಿನಿಮಾ ಮಾಡಿರಬಹುದು. ಆದರೆ ಯಾವ ಕಾರಣಕ್ಕೂ ರಾಮಚಾರಿ ಅಲ್ಲ ಎಂದರು.

ಇದೆಲ್ಲದರ ನಡುವೆ ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯಶ್ ಸರ್ಕಾರಕ್ಕೇ ಸವಾಲೆಸೆದರು. ವಿಷ್ಣುವರ್ಧನ್ ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅವರ ಸ್ಮಾರಕ ನಿರ್ಮಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಮ್ಮ ಕೈಲಾಗದಿದ್ದರೆ ಹೇಳಿ. ನಾವು ಅಭಿಮಾನಿಗಳೇ ಸೇರಿಕೊಂಡು ನಿರ್ಮಿಸುತ್ತೇವೆ ಎಂದು ಯಶ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದ ಚೆಲುವೆಗೆ ವಿಶ್ವಸುಂದರಿ ಕಿರೀಟ ಸಿಕ್ಕಿದ್ದು ಹೇಗೆ?