Webdunia - Bharat's app for daily news and videos

Install App

ಅವರ ಆರೋಗ್ಯ ಸರಿಯಿದೆಯಾ? ಏನು ಮಾಡ್ತಿದ್ದಾರೆ ಅವರು? ಚೇತನ್ ಆರೋಪಕ್ಕೆ ರಿಷಬ್ ಶೆಟ್ಟಿ ಟಾಂಗ್

Webdunia
ಗುರುವಾರ, 20 ಅಕ್ಟೋಬರ್ 2022 (09:00 IST)
WD
ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ಚಿತ್ರಿಸಲಾಗಿರುವ ದೈವ ಕೋಲ ಹಿಂದೂಗಳ ಸಂಪ್ರದಾಯ ಎಂಬುದು ತಪ್ಪು. ದೈವಾರಾಧನೆ ಮೂಲ ಹಿಂದೂ ಧರ್ಮವಲ್ಲ ಎಂದು ವಿವಾದ ಸೃಷ್ಟಿಸಿದ್ದ ನಟ ಚೇತನ್ ಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ತಿರುಗೇಟು ಕೊಟ್ಟಿದ್ದಾರೆ.

ತೆಲುಗು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಅವರ ಆರೋಪಕ್ಕೆ ನನ್ನದು ನೋ ಕಾಮೆಂಟ್ಸ್ ಎಂದಿದ್ದಾರೆ.

‘ಅವರು ಏನು ಮಾಡ್ತಾರೆ? ಅವರ ಆರೋಗ್ಯ ನೋಡಿಕೊಳ್ಳಲಿ’ ಎಂದು ನಕ್ಕ ರಿಷಬ್ ಬಳಿಕ ‘ನಾನು ಈ ಸಿನಿಮಾವನ್ನು ಮಾಡುವಾಗ ಈ ದೈವಾರಾಧನೆ ಮಾಡುವಂತಹ ಜನರೇ ನನ್ನ ಜೊತೆಗಿದ್ದರು. ಪ್ರತೀ ಶಾಟ್ ಬಗ್ಗೆ ಅವರನ್ನು ಕೇಳಿಕೊಂಡು ಆ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಮತ್ತೆ, ನಾನು ಅದೇ ತುಳುನಾಡಿನಿಂದ ಬಂದವನು. ದೈವಾರಾಧನೆ ಎಲ್ಲವನ್ನೂ ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದವನು. ಹಾಗಾಗಿ ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ನನ್ನ ಜೀವಹಿಂಡಿ ಈ ಸಿನಿಮಾಗೆ ಕೆಲಸ ಮಾಡಿದ್ದೇನೆ. ಸಿನಿಮಾ ಮಾಡುವುದು ನನ್ನ ಕೆಲಸ. ಚೇತನ್ ಆರೋಪಗಳಿಗೆ ಅದಕ್ಕೆ ಸಂಬಂಧಪಟ್ಟವರೇ ಉತ್ತರ ಕೊಡುತ್ತಾರೆ. ನನ್ನದು ನೋ ಕಾಮೆಂಟ್ಸ್’ ಎಂದಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖ್ಯಾತ ಯೂಟ್ಯೂಬರ್ ಪತ್ನಿ ಬಸ್ ಡ್ರೈವರ್ ಜತೆ ಓಡಿ ಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ತನ್ನ ಕಣ್ಣೆದುರೆ ಅಭಿಮಾನಿಗಳು ಮೇಲಿದ್ದ ಬಿದ್ದಾಗ ಯಶ್ ಹೇಗೆ ನಡೆದುಕೊಂಡ್ರು ನೋಡಿ, Video

ಯಶ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ, ಇಬ್ಬರು ಅಭಿಮಾನಿಗಳಿಗೆ ಗಾಯ

ಯಶ್ ಮನೆಯಲ್ಲಿಲ್ಲದಿದ್ದರೂ ಪೂಜೆ ಮಿಸ್ ಆಗದ ಹಾಗೆ ನೋಡಿಕೊಂಡ್ರು ರಾಧಿಕಾ ಪಂಡಿತ್

45ನೇ ವರ್ಷದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್‌, ಈ ಚರ್ಚೆಗೆ ಕಾರಣ ಈ ವಿಡಿಯೋ

ಮುಂದಿನ ಸುದ್ದಿ
Show comments