Publish Date: Sun, 09 Apr 2023 (08:50 IST)
Updated Date: Sun, 09 Apr 2023 (09:05 IST)
ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಬಳಿಕ ರಿಷಬ್ ಶೆಟ್ಟಿಗೆ ಖ್ಯಾತಿ ಹೆಚ್ಚಾಗಿದೆ. ಆದರೆ ಈಗ ರಿಷಬ್ ಯಾರ ಕೈಗೂ ಸಿಗುತ್ತಿಲ್ಲ. ಅದಕ್ಕೆ ಕಾರಣವೇನು ಗೊತ್ತಾ?
ಕಾಂತಾರ ಸಿನಿಮಾ ಸಕ್ಸಸ್ ಆದ ಬಳಿಕ ಎರಡನೇ ಭಾಗ ಮಾಡಿ ಎಂದು ಒತ್ತಾಯ ಹೆಚ್ಚಾಗಿತ್ತು. ಹೀಗಾಗಿ ಹೊಂಬಾಳೆ ಫಿಲಂಸ್ ಎರಡನೇ ಭಾಗ ಮಾಡುವುದಾಗಿ ಘೋಷಣೆ ಮಾಡಿದೆ.
ಹೀಗಾಗಿ ರಿಷಬ್ ಈಗ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ತಮ್ಮ ತವರಿಗೆ ತೆರಳಿದ್ದಾರೆ. ಕಾಂತಾರ 2 ಕತೆ ಬರೆಯಲು ಕಾಡಿಗೆ ಹೋಗಿರುವ ರಿಷಬ್ ಈಗ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪ್ರಮುಖ ರಾಜಕೀಯ ಪಕ್ಷಗಳೂ ಅವರನ್ನು ಪ್ರಚಾರಕ್ಕೆ ಕರೆಸಲು ಪ್ರಯತ್ನ ನಡೆಸಿದರೂ ರಿಷಬ್ ನಿರಾಕರಿಸಿದ್ದಾರಂತೆ. ಸದ್ಯಕ್ಕೆ ಅವರ ಗಮನ ಕೇವಲ ಕಾಂತಾರ 2 ಸ್ಕ್ರಿಪ್ಟ್ ಕಡೆಗೆ ಮಾತ್ರ ಇದೆ ಎನ್ನಲಾಗಿದೆ.