Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಮರ್ಡರ್ ಕೇಸ್: ಮಾಫಿ ಸಾಕ್ಷಿಯಾಗುವುದಾಗಿ ಪ್ರದೋಷ್ ಮನವಿ, ದರ್ಶನ್ ಗೆ ಏನು ಸಂಕಷ್ಟ

Darshan-Renukaswamy
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ಅವರ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ (Approver) ಯಾಗಲು ಸಿದ್ಧರಿದ್ದು, ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ದರ್ಶನ್ ಆಪ್ತನಾಗಿದ್ದ 14ನೇ ಆರೋಪಿ ಪ್ರದೋಷ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸಲು ಹಾಗೂ ಮಾಫಿ ಸಾಕ್ಷಿಯಾಗಲು ಇಚ್ಛಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಒಬ್ಬ ಆರೋಪಿಯೇ ಮಾಫಿ ಸಾಕ್ಷಿಯಾಗಿ ಬದಲಾಗಿ, ಕೃತ್ಯದ ಯೋಜನೆ, ಸಾಕ್ಷ್ಯ ನಾಶ ಮತ್ತು ಹಣಕಾಸಿನ ವಹಿವಾಟಿನ ಕುರಿತು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರೆ, ಅದು ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇತರ ಪ್ರಮುಖ ಆರೋಪಿಗಳಿಗೆ ಕಾನೂನಾತ್ಮಕವಾಗಿ ಬಹುದೊಡ್ಡ ಹಿನ್ನಡೆಯಾಗಲಿದೆ.

ಕೊಲೆಯ ನಂತರ ರೇಣುಕಾಸ್ವಾಮಿ ಮೃತದೇಹವನ್ನು ವಿಲೇವಾರಿ ಮಾಡಲು ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಹಣದ ವ್ಯವಸ್ಥೆ ಹಾಗೂ ಸಂಚು ರೂಪಿಸುವಲ್ಲಿ ಪ್ರದೋಷ್ ಪ್ರಮುಖ ಪಾತ್ರ ವಹಿಸಿದ್ದ ಎಂಬ ಆರೋಪ ಹೊರಿಸಲಾಗಿತ್ತು.

 
ಮಾಫಿ ಸಾಕ್ಷಿಯಾದರೆ ಏನಾಗಲಿದೆ?

ಸಿಆರ್‌ಪಿಸಿ (CrPC/BNSS) ನಿಯಮಾವಳಿಗಳ ಪ್ರಕಾರ, ಆರೋಪಿಯೊಬ್ಬ ಮಾಫಿ ಸಾಕ್ಷಿ (Approver) ಒಪ್ಪಿಕೊಂಡಾಗ, ಆತ ನ್ಯಾಯಾಲಯದ ಮುಂದೆ ಕೃತ್ಯದ ಸಂಪೂರ್ಣ ವಿವರಗಳನ್ನು ಸತ್ಯವಾಗಿ ಹೇಳಬೇಕಾಗುತ್ತದೆ. ಕೋರ್ಟ್ ಆತನ ಹೇಳಿಕೆಯನ್ನು ಪರಿಗಣಿಸಿ ಕ್ಷಮಾದಾನ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಆತನ ಹೇಳಿಕೆಯು ಪ್ರಕರಣದ ಇತರ ಮುಖ್ಯ ಆರೋಪಿಗಳಿಗೆ ನೇರ ಸಾಕ್ಷಿಯಾಗಿ ಪರಿಣಮಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್