Webdunia - Bharat's app for daily news and videos

Install App

ರೇಣುಕಾಸ್ವಾಮಿಯ ಚ್ಯಾಟ್ ವಿಚಾರವೇ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

Krishnaveni K
ಸೋಮವಾರ, 9 ಸೆಪ್ಟಂಬರ್ 2024 (10:29 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳು ಅವರ ವಿರುದ್ಧವಾಗಿದ್ದರೂ ಜಾಮೀನು ಸಿಗಲು ದರ್ಶನ್ ಗೆ ರೇಣುಕಾಸ್ವಾಮಿಯ ನಡತೆಯೇ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ದರ್ಶನ್ ಮಾತ್ರವಲ್ಲದೆ, ಪವಿತ್ರಾ ಗೌಡಗೂ ಈ ವಿಚಾರ ಅನುಕೂಲವಾಗಬಹುದು. ಹತ್ಯೆಯಾದ ರೇಣುಕಾಸ್ವಾಮಿಯೂ ಸಚ್ಚಾರಿತ್ರ್ಯ ಹೊಂದಿರುವವನಲ್ಲ. ಆತ ಪವಿತ್ರಾ ಗೌಡ ಜೊತೆ ಮಾಡಿದ ಇನ್ ಸ್ಟಾಗ್ರಾಂ ಮತ್ತು ವ್ಯಾಟ್ಸಪ್ ಚ್ಯಾಟ್ ಗಳೇ ಇದಕ್ಕೆ ಸಾಕ್ಷಿ. ಅಶ್ಲೀಲ ಸಂದೇಶಗಳು, ಫೋಟೋಗಳನ್ನು ಕಳುಹಿಸುತ್ತಿದ್ದ.

ದರ್ಶನ್ ಮತ್ತು ಪವಿತ್ರಾ ಗೌಡ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ವೇಳೆ ಈ ವಿಚಾರಗಳನ್ನು ಖಂಡಿತಾ ಉಲ್ಲೇಖಿಸಲಿದ್ದಾರೆ. ಆತನ ನಡತೆಯೂ ಸರಿಯಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಇದು ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಪಡೆಯಲು ಪ್ಲಸ್ ಪಾಯಿಂಟ್ ಆಗಬಹುದು.

ಪೊಲೀಸರು ಕೋರ್ಟ್ ಗೆ ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ರೇಣುಕಾ ಮತ್ತು ಪವಿತ್ರಾ ನಡುವೆ ನಡೆದ ಚ್ಯಾಟಿಂಗ್ ನ್ನು ಉಲ್ಲೇಖಿಸಿದ್ದಾರೆ. ಈ ಕೇಸ್ ನಲ್ಲಿ ಪೊಲೀಸರು ಪಿನ್ ಟು ಪಿನ್ ಸಾಕ್ಷ್ಯ ಒದಗಿಸಿ ಕೇಸ್ ಸ್ಟ್ರಾಂಗ್ ಮಾಡಿದ್ದಾರೆ. ಇದರಿಂದ ದರ್ಶನ್ ಆಂಡ್ ಗ್ಯಾಂಗ್ ಗೆ ಶಿಕ್ಷೆಯಾದರೂ ಆಗಬಹುದು. ಆದರೆ ಅದಕ್ಕೆ ಮೊದಲು ವಿಚಾರಣೆ ನಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಡುವೆ ರೇಣುಕಾಸ್ವಾಮಿ ನಡತೆ ಸರಿಯಿರಲಿಲ್ಲ ಎಂದು ವಕೀಲರು ಪ್ರೂವ್ ಮಾಡಿ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಕೊಡಿಸುವಲ್ಲಿ ಸಫಲವಾದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್

ಗಜಿನಿ, ಗಜ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ನಟ ಪ್ರದೀಪ್ ರಾವತ್‌ ಇನ್ನಿಲ್ಲ

ನಟ ಧ್ರುವ ವಿಕ್ರಮ್ ಜತೆಗಿನ ಬ್ರೇಕಪ್ ವದಂತಿ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ: ರಾಮಾಯಾಣ ಟ್ರೈಲರ್‌ ಆಯ್ತು, ಈಗ ಟಾಕ್ಸಿಕ್‌ ಸರದಿ

ಬಿಗ್​​ಬಾಸ್ ರಿಯಾಲಿಟಿ ಶೋ ಮೊದಲ ಪ್ರೋಮೊ ಬಿಡುಗಡೆ: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಸುದೀಪ್‌

ಮುಂದಿನ ಸುದ್ದಿ
Show comments