Select Your Language

Notifications

webdunia
webdunia
webdunia
webdunia

ಅಂಬರೀಷ್ ಸ್ಮಾರಕಕ್ಕೆ ಭೂಮಿ ಪೂಜೆ: ಭಾವುಕರಾದ ಸುಮಲತಾ

ಅಂಬರೀಷ್ ಸ್ಮಾರಕಕ್ಕೆ ಭೂಮಿ ಪೂಜೆ: ಭಾವುಕರಾದ ಸುಮಲತಾ
ಬೆಂಗಳೂರು , ಭಾನುವಾರ, 27 ಫೆಬ್ರವರಿ 2022 (17:45 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಬೇಕೆಂಬುದು ಅವರ ಕುಟುಂಬದವರು, ಅಭಿಮಾನಿಗಳ ಕನಸಾಗಿತ್ತು. ಅದರಂತೆ ಇಂದು ಭೂಮಿ ಪೂಜೆ ಮಾಡಲಾಗಿದೆ.

ಈ ವೇಳೆ ಮಾತನಾಡಿರುವ ಸುಮಲತಾ ಅಂಬರೀಷ್ ‘ಚಿತ್ರರಂಗದ ಕಷ್ಟ ಎಂದರೆ ಮುಂದೆ ನಿಲ್ಲುತ್ತಿದ್ದವರು ಅಂಬರೀಷ್. ಈ ಮಾತನ್ನು ನಾನು ಅವರ ಪತ್ನಿಯಾಗಿ ಅಲ್ಲ, ಅಭಿಮಾನಿಯಾಗಿ ಹೇಳುತ್ತಿದ್ದೇನೆ. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೂ 50% ಮಾತ್ರ ಸಂಭಾವನೆ ಪಡೆದಿದ್ದಾರೆ. ಎಷ್ಟೋ ನಿರ್ಮಾಪಕರು ಕಷ್ಟ ಎಂದು ಬಂದಾಗ ಸಂಭಾವನೆ ತೆಗೆದುಕೊಳ್ಳದೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕಾವೇರಿ ನೀರಿನ ಸಮಸ್ಯೆ ಬಂದಾಗ ರಾಜ್ಯದ ಜನರ ಪರವಾಗಿ ನಿಂತು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು’ ಎಂದು ಭಾವುಕರಾಗಿ ನೆನೆಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನಗಳೊಳಗೆ ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಫೈನಲ್