Webdunia - Bharat's app for daily news and videos

Install App

ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ

Webdunia
ಬುಧವಾರ, 20 ಸೆಪ್ಟಂಬರ್ 2017 (09:11 IST)
ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಪಕ್ಕಾ ರಾಜಕಾರಣಿಯಾಗಿ ಬಿಟ್ಟಿದ್ದಾರೆ. ನಂ.1 ನಟಿಯಾಗಿದ್ದ ರಮ್ಯಾ ಸಿನಿಮಾ ಕಡೆ ತಲೆಯೂ ಹಾಕಿರಲಿಲ್ಲ. ಆದರೆ ಇದೀಗ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದ್ದಾರಂತೆ.


ನಟ, ನಿರ್ದೇಶಕ ನಾಗಶೇಖರ್ ಭಗೀರಥ ಪ್ರಯತ್ನ ನಡೆಸಿ ರಮ್ಯಾರನ್ನು ತಮ್ಮ ನಿರ್ಮಾಣದ ಹೊಸ ಚಿತ್ರಕ್ಕೆ ಕರೆದೊಯ್ಯುತ್ತಿದ್ದಾರಂತೆ. ಆ ಚಿತ್ರದ ಹೆಸರು ‘ಮಹೇಂದ್ರನ ಮನಸ್ಸಲ್ಲಿ ಮುಮ್ತಾಜ್’ ಎಂದು. ಹೆಸರೇ ಹೇಳುವಾಗೆ ಇದೊಂದು ಹಿಂದೂ ಮುಸ್ಲಿಂ ಹುಡುಗ-ಹುಡುಗಿಯ ಪ್ರೇಮ ಕತೆ. ಹಿರಿಯ ನಿರ್ದೇಶಕ ಎಸ್. ಮಹೇಂದರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಗಣೇಶ್ ಜತೆ ನಾಯಕನ ಪಾತ್ರಕ್ಕೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ರಮ್ಯಾ ಇದರಲ್ಲಿ ನಾಯಕಿ ಪಾತ್ರದಲ್ಲಂತೂ ನಟಿಸುತ್ತಿಲ್ಲ. ವಿಶೇಷ ಪಾತ್ರವೊಂದರಲ್ಲಿ ನಟಿಸಿ ಹೋಗಲಿದ್ದಾರಂತೆ. ಅದಕ್ಕಾಗಿ ಅವರ ಮನ ಒಲಿಸುವ ಕೆಲಸ ನಡೆಯುತ್ತಿದೆ. ನವೆಂಬರ್ 11 ರಂದು ಚಿತ್ರ ಸೆಟ್ಟೇರಲಿದೆಯಂತೆ. ಅಂತೂ ರಮ್ಯಾ ಮತ್ತೆ ತೆರೆಗೆ ಬರಲಿ ಎಂಬುದು ಅವರ  ಅಭಿಮಾನಿಗಳ ಹಾರೈಕೆ.

ಇದನ್ನೂ ಓದಿ…  ಕೊಹ್ಲಿ ನೆಪ ಮಾತ್ರಕ್ಕೆ ನಾಯಕ, ಈಗಲೂ ಬೌಲರ್ ಗಳ ಜುಟ್ಟು ಧೋನಿ ಕೈಯಲ್ಲಿ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments