Webdunia - Bharat's app for daily news and videos

Install App

Rajinikanth: ಲೈವ್ ಬಂದು ಕನ್ನಡದಲ್ಲೇ ಮಾತನಾಡಿದ ರಜನೀಕಾಂತ್: ಕಾರಣ ಕೇಳಿದ್ರೆ ಶಹಬ್ಬಾಶ್ ಅಂತೀರಿ (ವಿಡಿಯೋ)

Krishnaveni K
ಶನಿವಾರ, 18 ಜನವರಿ 2025 (14:19 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ವಿದೇಶದಲ್ಲಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕನ್ನಡದಲ್ಲೇ ಮಾತನಾಡಿ ವಿಶೇಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಾರಣ ತಿಳಿದರೆ ನೀವೂ ಹೆಮ್ಮೆಪಡುತ್ತೀರಿ.

ರಜನೀಕಾಂತ್ ಓದಿದ್ದು ಎಲ್ಲಾ ಬೆಂಗಳೂರಿನಲ್ಲೇ. ತಾವು ಓದಿದ ಎಪಿಎಸ್ ಹೈಸ್ಕೂಲ್ ಮತ್ತು ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಜನೀಕಾಂತ್ ವಿಡಿಯೋ ಸಂದೇಶ ನೀಡಿದ್ದಾರೆ. ತಮ್ಮ ಶಾಲೆ, ಕಾಲೇಜಿನ ದಿನಗಳ ಬಗ್ಗೆ ಹೆಮ್ಮೆಯಿಂದಲೇ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಓದಿದ್ದು ಎಲ್ಲಾ ಎಪಿಎಸ್ ನಲ್ಲೇ. ನಾನು ಮಿಡ್ಲ್ ಕ್ಲಾಸ್ ನಲ್ಲಿ ಓದಿನಲ್ಲಿ ಮುಂದಿದ್ದೆ. 98% ಅಂಕ ತೆಗೆದುಕೊಳ್ಳುತ್ತಿದ್ದೆ. ಆದರೆ ಚೆನ್ನಾಗಿ ಓದುತ್ತೀನಲ್ಲಾ ಅಂತ ನನ್ನ ಅಣ್ಣ ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಹಾಕಿದ್ರು. ಆದರೆ ಇದ್ದಕ್ಕಿದ್ದಂತೆ ಇಂಗ್ಲಿಷ್ ಮೀಡಿಯಂಗೆ ಹಾಕಿದಾಗ ಕಷ್ಟವಾಯಿತು. ಆಗ ನನಗೆ 8,9 ರಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದರು. ಆದರೆ ಪಬ್ಲಿಕ್ ನಲ್ಲಿ ಕಷ್ಟವಾಯಿತು. ಆಗ ನನಗೆ ಅಲ್ಲಿ ಒಬ್ಬರು ಸರ್ ನನಗೆ ಫ್ರೀ ಆಗಿ ಪಾಠ ಮಾಡಿ ಪಾಸ್ ಮಾಡಿದರು. ಬಳಿಕ ಎಪಿಎಸ್ ಕಾಲೇಜಿನಲ್ಲಿ ಸೇರಿಕೊಂಡೆ’ ಎಂದು ರಜನೀ ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.

ಇನ್ನು ಇಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ನಾನು ಕತೆ ಹೇಳುತ್ತಿದ್ದುದನ್ನು ಗಮನಿಸಿ ನನ್ನನ್ನು ಡ್ರಾಮಾಗೆ ಸೇರು ಎಂದು ಸೇರಿಸಿದರು. ಅಲ್ಲಿಂದ ನನ್ನ ನಟನೆಯ ಕೆರಿಯರ್ ಶುರುವಾಯಿತು  ಎಂದು ರಜನಿ ವಿವರವಾಗಿ ಹೇಳಿದ್ದಾರೆ. ಸಾಕಷ್ಟು ವಿಚಾರಗಳನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments