Select Your Language

Notifications

webdunia
webdunia
webdunia
webdunia

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (09:01 IST)
ಬೆಂಗಳೂರು: ಡಾ. ರಾಜ್ ಕುಮಾರ್ ಅವರ 13 ನೇ ಪುಣ್ಯ ತಿಥಿ ನಿನ್ನೆ. ಈ ದಿನ ರಾಜ್ ಪುಣ್ಯ ಭೂಮಿಗೆ ಪೂಜೆ ಸಲ್ಲಿಸಿದ ರಾಘವೇಂದ್ರ ರಾಜ್ ಕುಮಾರ್, ಶಿವಣ್ಣ ಮತ್ತು ಪುನೀತ್ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ.


ರಾಘವೇಂದ್ರ ರಾಜ್ ಕುಮಾರ್ ಪೂಜೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮತ್ತೆ ತಾವು ಸಹೋದರರು ಒಟ್ಟಾಗಿ ಸಿನಿಮಾ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ.

ಹಿಂದೆಯೂ ಹಲವು ಬಾರಿ ಈ ಮೂವರೂ ಸಹೋದರರು ಜತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಒತ್ತಾಯ ಕೇಳಿಬಂದಿತ್ತು. ಈ ವರ್ಷವಾದರೂ ಅದು ನೆರವೇರಬಹುದು ಎಂದು ರಾಘಣ್ಣ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಕತೆಯ ಹುಡುಕಾಟದಲ್ಲಿದ್ದೇವೆ. ಅಂತಹ ಒಳ್ಳೆಯ ಕತೆ ಬಂದರೆ ಈ ವರ್ಷವೇ ಒಟ್ಟಾಗಿ ನಟಿಸುತ್ತೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಸಿಹಿ ಸುದ್ದಿಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಪಂಚತಂತ್ರ ಭಾಗ 2 ಶುರು ಮಾಡಲಿರುವ ಭಟ್ಟರು! ಈ ಬಾರಿ ಖ್ಯಾತ ನಟನ ಸೇರ್ಪಡೆ