Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಗೆ ಧನ್ಯವಾದ ತಿಳಿಸಿದ ರಾಘವ ಲಾರೆನ್ಸ್

ಈ ಕಾರಣಕ್ಕೆ ನಟ  ಅಕ್ಷಯ್ ಕುಮಾರ್ ಗೆ ಧನ್ಯವಾದ ತಿಳಿಸಿದ ರಾಘವ ಲಾರೆನ್ಸ್
ಚೆನ್ನೈ , ಸೋಮವಾರ, 12 ಅಕ್ಟೋಬರ್ 2020 (12:48 IST)
ಚೆನ್ನೈ : ಕಾಂಚನ ದಂತಹ ಸೂಪರ್ ಹಿಟ್ ಹಾರರ್ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಟ , ನಿರ್ದೇಶಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ಅದಕ್ಕಾಗಿ ತಮಗೆ ಬೆಂಬಲ ನೀಡಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಹೌದು. ರಾಘವ ಲಾರೆನ್ಸ್ ಅವರು ಕೊನೆಯ ಬಾರಿ ಕಾಂಚನ 3 ಸಿನಿಮಾವನ್ನು ನಿರ್ದೇಶಿಸಿದ್ದರು. ಹಾಗೇ ಅವರ ಕಾಂಚನ (2011) ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಇದಕ್ಕೆ ಲಕ್ಷ್ಮೀ ಬಾಂಬ್ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಇದೀಗ ಈ ಚಿತ್ರದ ಮೂಲಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಘವ ಲಾರೆನ್ಸ್ ಅವರು, ಲಕ್ಷ್ಮೀ ಬಾಂಬ್ ಸಿನಿಮಾ ಟ್ರೇಲರ್ ಗೆ ನೀವು ತೋರಿದ ನಿಮ್ಮ ಪ್ರೀತಿ , ಬೆಂಬಲ ನನಗೆ ತುಂಬಾ ಸಂತೋಷ ನೀಡಿದೆ. ಅಕ್ಷಯ್ ಕುಮಾರ್ ಸರ್ ಗೆ ನನ್ನ ವಿಶೇಷ ಧನ್ಯವಾದ, ಚಿತ್ರದ ಯಶಸ್ಸಿಗೆ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಕೈ ಕೊಟ್ಟ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ