Select Your Language

Notifications

webdunia
webdunia
webdunia
webdunia

ಕನ್ನಡದ ತಂಟೆಗೆ ಬಂದ್ರೆ... ಕಮಲ್ ಹಾಸನ್ ಗೆ ಬೆಂಡೆತ್ತಿದ ರಚಿತಾ ರಾಮ್: ಶಿವಣ್ಣಗೇ ಗೂಟ ಇಟ್ರಾ ಎಂದ ಫ್ಯಾನ್ಸ್

Rachitha Ram

Krishnaveni K

ಬೆಂಗಳೂರು , ಶನಿವಾರ, 31 ಮೇ 2025 (10:05 IST)
Photo Credit: Instagram
ಬೆಂಗಳೂರು: ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿರುವ ಮಾತು ವಿವಾದವಾಗಿರುವ ಬೆನ್ನಲ್ಲೇ ನಟಿ ರಚಿತಾ ರಾಮ್ ವಿಡಿಯೋ ಮೂಲಕ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಶಿವಣ್ಣಂಗೇ ಗೂಟ್ ಇಟ್ಟಂಗೆ ಕಾಣ್ತಿದೆ ಎಂದು ಕಾಲೆಳೆದಿದ್ದಾರೆ.

ಥಗ್ಸ್ ಆಫ್ ಲೈಫ್ ಮೂವಿ ಸಿನಿಮಾ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಶಿವಣ್ಣನ ಎದುರೇ ಹೇಳಿದ್ದ ಕಮಲ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಮೇಲಿನಿಂದ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಸಮರ್ಥಿಸುತ್ತಾ ಬಂದಿದ್ದಾರೆ.

ಇದೀಗ ವಿವಾದದ ಬಗ್ಗೆ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಕನ್ನಡ, ಕರ್ನಾಟಕ ಎಂದು ಬಂದರೆ ಪ್ರತಿಯೊಬ್ಬ ಕನ್ನಡಿಗನೂ ಇಮೋಷನ್, ನಮ್ಮ ಭಾಷೆ ಬಗ್ಗೆ ಯಾರಾದರೂ ಟೀಕೆ ಮಾಡ್ತಿದ್ದಾರೆ ಎಂದರೆ ನಾವು ಕನ್ನಡದವರು ಸುಮ್ಮನೇ ಕೂರಕ್ಕಾಗಲ್ಲ ಅಲ್ವಾ? ನಾವು ಎಲ್ಲಾ ಭಾಷೆ ಸಿನಿಮಾ ನೋಡ್ತೀವಿ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಮಾತನಾಡಿದಾಗ ಅದಕ್ಕೆ ನಾವ್ಯಾಕೆ ಧ್ವನಿಯೆತ್ತಬಾರದು. ಚಿಕ್ಕವರು ತಪ್ಪು ಮಾಡಿದಾಗ ದೊಡ್ಡವರು ಕ್ಷಮೆ ಕೇಳುವವರೆಗೂ ಬಿಡಲ್ಲ. ದೊಡ್ಡವರೇ ತಪ್ಪು ಮಾಡಿದ್ರೆ? ತಪ್ಪು ಮಾಡಿ ಆದ ಮೇಲೆ ಕ್ಷಮೆ ಕೇಳುವುದರಲ್ಲಿ ಏನು ತಪ್ಪಿದೆ?’ ಎಂದು ರಚಿತಾ ವಿಡಿಯೋದಲ್ಲಿ ಹೇಳಿದ್ದಾರೆ.

ಅವರ ಈ  ವಿಡಿಯೋ ನೋಡಿದ ನೆಟ್ಟಿಗರು ಯಾಕೋ ಇದು ಶಿವಣ್ಣನಿಗೇ ಗೂಟ ಇಟ್ಟ ಹಾಗಿದೆ. ನೀವು ನಿಜವಾದ ಕನ್ನಡತಿ. ಇದಕ್ಕೇ ನೀವು ಇಷ್ಟವಾಗೋದು ಎಂದು ಕಾಮೆಂಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Actor Darshan: ವಿದೇಶಕ್ಕೆ ತೆರಳಲು ನಟ ದರ್ಶನ್‌ಗೆ ಸಿಕ್ತು ಅವಕಾಶ, ಡೆವಿಲ್ ಸಿನಿಮಾ ತಂಡಕ್ಕೆ ಗುಡ್‌ನ್ಯೂಸ್‌