ನಿಖಿಲ್ ಜತೆ ಮದುವೆ ರೂಮರ್: ಕೊನೆಗೂ ಬಾಯ್ಬಿಟ್ಟ ರಚಿತಾ ರಾಮ್

Webdunia
ಗುರುವಾರ, 23 ಜನವರಿ 2020 (09:17 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ರಚಿತಾ ರಾಮ್ ಶುಭ ಹಾರೈಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ರೂಮರ್ ಹೆಚ್ಚಾಗಿತ್ತು. ಕೊನೆಗೂ ಈ ಬಗ್ಗೆ ರಚಿತಾ ಸ್ಪಷ್ಟನೆ ಕೊಟ್ಟಿದ್ದಾರೆ.


ನಿನ್ನೆ ಇಬ್ಬರ ಫೋಟೋ ನೋಡಿ ನೆಟ್ಟಿಗರು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದರು. ಈ ಗಾಸಿಪ್ ಗಳಿಂದ ಬೇಸತ್ತ ರಚಿತಾ ರಾಮ್ ಇನ್ ಸ್ಟಾಗ್ರಾಂ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

‘ನನ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಹಬ್ಬುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ನನ್ನ ಸಿನಿಮಾ ವಿಚಾರಗಳಾಗಲಿ, ವೈಯಕ್ತಿಕ ವಿಚಾರಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯ ಎಂದು ಪರಿಗಣಿಸಿ. ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು. ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ.

ಅತೀ ಮುಖ್ಯವಾದ ವಿಚಾರವೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ’ ಎಂದು ರಚಿತಾ ಸುದೀರ್ಘವಾಗಿ ಬರೆದು ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಶ್ಚಿಯನ್ ಸಂಪ್ರದಾಯದಂತೆ ತಾಯಿ ಅಂತ್ಯ ಕ್ರಿಯೆ: ಟೀಕಿಸಿದವರಿಗೆ ಖಡಕ್ ಕೌಂಟರ್ ಕೊಟ್ಟ ಪ್ರಕಾಶ್ ರಾಜ್

ರಾಮಾಯಣ ಸಿನಿಮಾಕ್ಕಾಗಿ ರಣಬೀರ್‌, ಸಾಯಿ ಪಲ್ಲವಿ ಪಡೆದ ಸಂಭಾವನೆ ಸುದ್ದಿಯಾಗುತ್ತಿರುವುದು ಇದೇ ಕಾರಣಕ್ಕೆ

ನಿಮ್ಮ ತಾಯಿಯ ನಂಬಿಕೆಗೆ ಬೆಲೆ ಕೊಟ್ರಿ, ಎಲ್ಲರ ನಂಬಿಕೆಯೂ ಅಷ್ಟೇ ಮುಖ್ಯ ಅಲ್ವಾ: ಪ್ರಕಾಶ್ ರಾಜ್ ಗೆ ನೆಟ್ಟಿಗರ ಟಾಂಗ್

ರಾಮಾಯಣ ಟೀಸರ್ ರಿಲೀಸ್, ಯಶ್ ಇದ್ದಾರ ಎಂದು ತಿಳಿಯಬೇಕಿದ್ದರೆ ಇಲ್ಲಿದೆ ವಿಡಿಯೋ

ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಕಾಪಿರೈಟ್‌ ಉಲ್ಲಂಘಟನೆ: ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಬರೋಬ್ಬರಿ ₹25 ಲಕ್ಷ ದಂಡ

ಮುಂದಿನ ಸುದ್ದಿ
Show comments