Webdunia - Bharat's app for daily news and videos

Install App

ಸ್ವಲ್ಪ ಜಾಸ್ತಿಯಾಯಿತು: ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಎಚ್ಚರಿಕೆ ಕೊಟ್ಟಿದ್ದು ಯಾಕೆ

Krishnaveni K
ಶುಕ್ರವಾರ, 8 ನವೆಂಬರ್ 2024 (11:18 IST)
ಬೆಂಗಳೂರು: ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದ ಮೇಲೆ ನಟಿ ಸಂಜನಾ ಬುರ್ಲಿ ಬಗ್ಗೆ ದಿನಕ್ಕೊಂದು ರೂಮರ್ಸ್ ಬರುತ್ತಲೇ ಇರುತ್ತದೆ. ಇದೀಗ ತನ್ನ ಬಗ್ಗೆ ಕೇಳಿಬರುತ್ತಿರುವ ರೂಮರ್ ಗಳ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಜನಾಗೆ ಸ್ನೇಹ ಪಾತ್ರ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಅದರಲ್ಲೂ ಸೀರಿಯಲ್ ನಲ್ಲಿ ಆಗಿ ಡಿಸಿ ಆಗಿ ಖಡಕ್ ಪಾತ್ರ ಮಾಡುತ್ತಿದ್ದರು. ಆದರೆ ಅಷ್ಟೊಂದು ಒಳ್ಳೆಯ ಪಾತ್ರ ಬಿಟ್ಟಿದ್ದೇಕೆ ಎಂದು ಎಲ್ಲರಿಗೂ ಅಚ್ಚರಿಯಾಗಿತ್ತು. ಇದಕ್ಕೆ ಸಂಜನಾ ಸ್ವತಃ ಸ್ಪಷ್ಟನೆ ಕೊಟ್ಟಿದ್ದರು. ನನ್ನ ಭವಿಷ್ಯದ ದೃಷ್ಟಿಯಿಂದ ಹೊರಬರುವುದು ಅನಿವಾರ್ಯವಾಯಿತು ಎಂದಿದ್ದರು.

ಆದರೆ ಜನರಿಂದ ಅಷ್ಟು ಒತ್ತಾಯವಿದ್ದರೂ ಸಂಜನಾ ಧಾರವಾಹಿಗೆ ಬರದೇ ಇರಲು ಕಾರಣವೇನು ಎಂದು ಎಲ್ಲರೂ ತಮಗೆ ತೋಚಿದಂತೆ ಕಾಮೆಂಟ್ ಮಾಡುತ್ತಿದ್ದರು. ಹಲವರು ಸಂಜನಾ ಬಿಗ್ ಬಾಸ್ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಬಹುದು. ಅದಕ್ಕೇ ಸೀರಿಯಲ್ ಬಿಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು.

ಇದಕ್ಕೀಗ ಸ್ವತಃ ಸಂಜನಾ ಸ್ಪಷ್ಟನೆ ನೀಡಿದ್ದಾರೆ. ‘ಎಲ್ಲಾ ಸ್ವಲ್ಪ ಓವರ್ ಆಯ್ತು. ನಾನು ರಿಯಾಲಿಟಿ ಶೋಗೆ ಹೋಗಲಿದ್ದೇನೆ ಎಂದೆಲ್ಲಾ ಸುದ್ದಿ ಬರುತ್ತಿದೆ. ಆದರೆ ಇದು ಯಾವುದೂ ನಿಜವಲ್ಲ. ನಾನು ಸೀರಿಯಲ್ ಬಿಟ್ಟಿದ್ದು ಯಾಕೆ ಎಂದು ಹೇಳಿಲ್ಲ ಎಂದು ಎಲ್ಲರೂ ತಮಗೆ ತೋಚಿದ ಕಾರಣ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ಯಾವುದೂ ನಿಜವಲ್ಲ. ನಾನು ಯಾಕೆ ಬಿಟ್ಟೆ ಎನ್ನುವುದು ನನ್ನ ಮನಸ್ಸಿಗೆ ಮಾತ್ರ ಗೊತ್ತು. ನಾನಾಗಿಯೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡುವವರೆಗೂ ಯಾವ ವದಂತಿಗಳನ್ನೂ ನಂಬಬೇಡಿ’ ಎಂದು ಸಂಜನಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments