Select Your Language

Notifications

webdunia
webdunia
webdunia
Sunday, 13 April 2025
webdunia

ಪವರ್ ಸ್ಟಾರ್ ಪುನೀತ್ ಗೆ ಹೂಮಳೆ, ಜವಾರಿ ರೊಟ್ಟಿ ಹಬ್ಬದೂಟ

ಯುವರತ್ನ
ಬೆಂಗಳೂರು , ಸೋಮವಾರ, 22 ಮಾರ್ಚ್ 2021 (09:25 IST)
ಬೆಂಗಳೂರು: ಯುವರತ್ನ ಸಿನಿಮಾ ಪ್ರಮೋಷನ್ ಗೆ ತಮ್ಮ ಚಿತ್ರತಂಡದ ಜೊತೆಗೆ ರಾಜ್ಯ ಪ್ರವಾಸದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.


ನಿನ್ನೆ ಬೆಳಗಾವಿ, ಕಲಬುರಗಿಗೆ ಬಂದಿಳಿದ ಯುವರತ್ನನಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹೂವಿನ ಮಳೆಗೆರೆದು ಸ್ವಾಗತ ಕೋರಿದ್ದಾರೆ. ಮತ್ತೆ ಕೆಲವು ಕಡೆ ಕನ್ನಡ ಬಾವುಟ ಹಾರಿಸಿ ನೃತ್ಯ ಮಾಡಿ, ಆರತಿ ಎತ್ತಿ ಸ್ವಾಗತ ಕೋರಿದ್ದಾರೆ.

ಈ ನಡುವೆ ಉತ್ತರ ಕರ್ನಾಟಕ ಶೈಲಿಯ ಜವಾರಿ ರೊಟ್ಟಿ ಊಟ ಸವಿದ ಪುನೀತ್ ಅಭಿಮಾನಿಗಳಿಗೆ ಯುವರತ್ನ ಸಿನಿಮಾ ನೋಡಿ ಆಶೀರ್ವದಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್,  ಡಾಲಿ ಧನಂಜಯ್, ರವಿಶಂಕರ್ ಗೌಡ ಮತ್ತಿತರರು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದಲೇ ಸೀಕ್ರೆಟ್ ಆಗಿ ಫೋನ್ ಬಳಸ್ತಿದ್ದಾರಾ ಸ್ಪರ್ಧಿಗಳು?